ಕಾರಂಜಿಯಾದಿಂದ 40 ಕಿ.ಮೀ. ದೂರದಲ್ಲಿರುವ ಭೀಮಕುಂಡ ನೈಸರ್ಗಿಕ ಜಲಾಶಯ. ವ್ಯಾಪಕ ನೈಸರ್ಗಿಕ ಸೌಂದರ್ಯ ಪ್ರದೇಶದಲ್ಲಿರುವ ಜಲಾಶಯವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ದ್ರೌಪತಿಯೊಂದಿಗೆ ಇಲ್ಲಿನ ಅರಣ್ಯಗಳಲ್ಲಿ ತೆರಳುತ್ತಿದ್ದಾಗ ಪಾಂಡವರಲ್ಲಿ ಎರಡನೇಯವನಾದ ಭೀಮನು ಇಲ್ಲಿ ಸ್ನಾನ ಮಾಡಿದ ಎಂದು ಪುರಾಣಗಳಲ್ಲಿದೆ. ಇದುವರೆಗೆ ಈ ಪ್ರದೇಶವನ್ನು ಪವಿತ್ರವೆಂದು ಪರಿಗಣಿಸಲಾಗಿದ್ದು, ಪ್ರತೀ ಜನವರಿಯಲ್ಲಿ ಬರುವ ಮಕರ ಸಂಕ್ರಾಂತಿಯಂದು ಭಾರೀ ಸಂಖ್ಯೆಯಲ್ಲಿ ಜನರು ಬಂದು ಪವಿತ್ರ ಸ್ನಾನಗೈಯುತ್ತಾರೆ.
ಈ ವೇಳೆ ಮಕರ ಮೇಳವನ್ನು ಆಯೋಜಿಸಲಾಗುತ್ತದೆ. ಜಲಾಶಯದ ಸಮೀಪದಲ್ಲೇ ಕುಂದೇಶ್ವರ ಎನ್ನುವ ಶಿವನ ಮಂದಿರವಿದೆ. ಇಲ್ಲೇ ಇರುವ ಮತ್ತೊಂದು ಮಂದಿರ ರಂಗಬುರುಗೆ ಭೇಟಿ ನೀಡುವ ಸ್ಥಳೀಯ ಬುಡಕಟ್ಟು ಜನಾಂಗದವರು ರಂಗಬುರು ಮಾತೆಯನ್ನು ಆರಾಧಿಸುತ್ತಾರೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಪಿಕ್ನಿಕ್ ಗೆ ಹೇಳಿಮಾಡಿಸಿದಂತಿದೆ.