ವಿವರನ್ ಕೋವಿಲ್ ಕರೈಕುಡಿಯಿಂದ ಮಧುರೈಗೆ ಸಾಗುವ ರಸ್ತೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಕರೈಕುಡಿಯಿಂದ 10 ಕಿ.ಮೀ ದೂರದಲ್ಲಿದ್ದು, ಸ್ಥಳೀಯ ಬಸ್ಸುಗಳ ಅಥವಾ ಖಾಸಗಿ ಟ್ಯಾಕ್ಸಿಗಳ ಮೂಲಕ ಸುಲಭವಾಗಿ ತಲುಪಬಹುದು.
ಈ ದೇವಾಲಯವನ್ನು ಶಿವನ ಅವತಾರಗಳಲ್ಲಿ ಒಂದಾದ ಭೈರವನಿಗಾಗಿ ನಿರ್ಮಿಸಲಾಗಿದೆ. ಪ್ರತಿದಿನವು ಬೈರವನ ಆಶೀರ್ವಾದವನ್ನು ಪಡೆಯುವ ಸಲುವಾಗಿ ಹಲವಾರು ಭಕ್ತಾಧಿಗಳು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ ಮತ್ತು ಬೈರವನಿಗೆ ಹಲವಾರು ರೀತಿಯ ಸೇವೆಗಳನ್ನು ಸಮರ್ಪಿಸುತ್ತಿರುತ್ತಾರೆ. ಈ ದೇವಾಲಯದ ಹೊರಗೆ ಒಂದು ಚಿಲುಮೆಯಿದೆ. ಈ ದೇವರಿಗೆ ಪೂಜೆ ಸಲ್ಲಿಸುವ ಮೊದಲು ಇಲ್ಲಿ ಶುಚಿರ್ಭೂತರಾಗಿ ಹೋಗಬೇಕೆಂಬ ನಂಬಿಕೆ ಇಲ್ಲಿ ನೆಲೆಸಿದೆ.
ದಂತಕಥೆಯ ಪ್ರಕಾರ, ಈ ದೇವಾಲಯವು ಶ್ರೀರಾಮನ ಹೆಸರಿನೊಂದಿಗೆ ತಳಕು ಹಾಕಿಕೊಂಡಿದೆ. ಇದೆ ಸ್ಥಳದಲ್ಲಿ ಶ್ರೀರಾಮನು ತನ್ನ ಮಡದಿ ಸೀತಾದೇವಿ ಲಂಕೆಯಲ್ಲಿ ಸುರಕ್ಷಿತಳಾಗಿದ್ದಾಳೆ ಎಂಬ ವರ್ತಮಾನವನ್ನು ಹನುಮಂತನಿಂದ ಪಡೆದನಂತೆ. ಈ ಸುದ್ದಿ ಕೇಳಿದ ರಾಮನು ಸಾಕ್ಷಿಯಾಗಿ ಸೀತಾದೇವಿಯ ಆಭರಣವನ್ನು ಸಹ ನೋಡಿದನು. ವೇದನೆ ತಡೆಯಲಾರದೆ ರಾಮನು ಇಲ್ಲಿ ಕುಸಿದು ಬಿದ್ದನಂತೆ ಮತ್ತು ಹನುಮಂತನಿಗೆ ಧನ್ಯವಾದವನ್ನು ಹೇಳಿದನಂತೆ.