ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ತೆನ್ ತಿರುಪತಿಯು ಅರಿಯಕ್ಕುಡಿಯಲ್ಲಿದೆ. ಇದು ಕರೈಕುಡಿಯಿಂದ ಅಂದಾಜು 5 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಮುಖ್ಯ ದೇವರು ವೆಂಕಟಾಚಲಪತಿ. ಹೀಗಾಗಿ ಇದು ಆಸ್ತಿಕರ ವಲಯದಲ್ಲಿ ಅತ್ಯಂತ ಆದರಕ್ಕೆ ಪಾತ್ರವಾಗಿದೆ. ಈ ದೇವರನ್ನು ತಿರುವೆಂಕಡಮುಡಯಿಯನ್ ಎಂದು ಸಹ ಕರೆಯಲಾಗುತ್ತದೆ. ಈ ದೇವಾಲಯವನ್ನು ವೆಂಕಟರಮಣಸ್ವಾಮಿಯ ಭೂಲೋಕದ ನಿವಾಸಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜನರ ನಂಬಿಕೆಯ ಪ್ರಕಾರ, ಈ ದೇವಾಲಯದಲ್ಲಿ ಪ್ರಾರ್ಥಿಸುವುದು ತಿರುಪತಿಯಲ್ಲಿ ಪೂಜೆ ಸಲ್ಲಿಸುವುದಕ್ಕೆ ಸಮವೆಂದು ಭಾವಿಸಲಾಗಿದೆ. ಹಾಗಾಗಿಯೆ ಇದಕ್ಕೆ ತೆನ್ ತಿರುಪತಿ ಅಥವಾ ದಕ್ಷಿಣದ ತಿರುಪತಿ ಎಂಬ ಹೆಸರು ಬಂದಿದೆ.
ತೆನ್ ತಿರುಪತಿಯು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು, ಇತ್ತೀಚೆಗೆ ತಾನೆ ಜೀರ್ಣೋದ್ಧಾರಗೊಂಡಿದೆ. ಆದರೆ ಈ ಪ್ರಕ್ರಿಯೆಯು ಈ ದೇವಾಲಯದ ಮೂಲ ಸ್ವರೂಪವನ್ನು ಅಳಿಸಿಹಾಕಿತು. ಆದರೆ ಈ ದೇವಾಲಯದ ಅಸ್ತಿತ್ವದ ದೃಷ್ಟಿಯಿಂದ ಜೀರ್ಣೋದ್ಧಾರ ಆಗಲೇ ಬೇಕಿತ್ತು. ಆದರು ಸಹ ಈ ದೇವಾಲಯದಲ್ಲಿ ಗರುಡನ ಮೂರ್ತಿಯನ್ನು ಮೂಲ ಸ್ವರೂಪದಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದು ದೇವಾಲಯದ ಉತ್ತರ ಭಾಗದಲ್ಲಿದ್ದು, ಇದನ್ನು ಕಾಲ್ಗರುಡನ್ ಎಂದು ಕರೆಯುತ್ತಾರೆ.
ಪ್ರತಿದಿನವು ಇಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಆ ಸಮಯದಲ್ಲಿ ಇಲ್ಲಿ ಭಕ್ತಾಧಿಗಳು ಮತ್ತು ಪ್ರವಾಸಿಗರು ತಪ್ಪದೆ ಹಾಜರಿರುತ್ತಾರೆ.