ಮೀನಾಕ್ಷಿ ಸುಂದರೇಶ್ವರ್ ದೇವಾಲಯವು ದೇಶದ ಅತಿದೊಡ್ಡ ದೇವಾಲಯಗಳ ಪೈಕಿ ಒಂದಾಗಿದ್ದು, ಕರೈಕುಡಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಮೂಲತಃ ಕುಲಸೇಕರ ಪಾಂಡ್ಯನ್ ನಿರ್ಮಿಸಿದನೆಂದು ತಿಳಿದು ಬಂದಿದೆ. ಆದರೆ ಪ್ರಸ್ತುತ, ಇದು ಕೇವಲ ಅವಶೇಷಗಳಲ್ಲಿ ಮಾತ್ರ ಉಳಿದಿದೆ. ಮುಂದೆ 16ನೇ ಶತಮಾನದಲ್ಲಿ ಇದನ್ನು ವಿಶ್ವನಾಥ ನಾಯ್ಕರ್ ಎಂಬುವವರು ಪುನರ್ ನಿರ್ಮಾಣ ಮಾಡಲು ಆರಂಭಿಸಿದರು. ಕೊನೆಗೆ ತಿರುಮಲ ನಾಯ್ಕರ್ ಇದನ್ನು ಪೂರ್ಣಗೊಳಿಸಿದರು.
ಇಂದಿನ ಜನರು ಇದರ ಭವ್ಯ ನೋಟಕ್ಕೆ ಮಾರು ಹೋಗುತ್ತಾರೆ. ಆ ಕಾಲಕ್ಕೆ ಇದು ತಂತ್ರಜ್ಞಾನದ ದೃಷ್ಟಿಯಿಂದ, ವಾಸ್ತುಶಿಲ್ಪ ಶೈಲಿಯ ದೃಷ್ಟಿಯಿಂದ ತುಂಬಾ ಮುಂದುವರಿದಿತ್ತು ಎಂದು ತಿಳಿದು ಬಂದಿದೆ. ಈ ದೇವಾಲಯವು ಬೃಹದಾಕಾರವಾದ 12 ಗೋಪುರಗಳನ್ನು ಹೊಂದಿದೆ. ಅದರಲ್ಲಿ ಎತ್ತರವಾದ ನಾಲ್ಕು ಗೋಪುರಗಳು ಈ ದೇವಾಲಯದ ಹೊರಗೋಡೆಯ ಮೇಲೆ ನಿಂತಿವೆ. ಈ ದೇವಾಲಯದಲ್ಲಿರುವ ಕಂಬಗಳನ್ನು ಬಡಿದರೆ ಇಂಪಾದ ಸಂಗೀತ ನಾದ ಹೊರಹೊಮ್ಮುತ್ತದೆ. ಬೇರೆ ಬೇರೆ ಕಂಬಗಳು ಬೇರೆ ಬೇರೆ ನಾದವನ್ನು ಹೊರ ಹೊಮ್ಮಿಸುತ್ತವೆ. ದೇವಾಲಯದ ಗರ್ಭಗುಡಿಗೆ ಎಡಭಾಗದಲ್ಲಿರುವ ಕಲ್ಯಾಣಿಯಲ್ಲಿ ಪ್ರಸಿದ್ಧವಾದ ಹೊಂಬಣ್ಣದ ತಾವರೆ ಹೂವುಗಳನ್ನು ಕಾಣಬಹುದು.
ಈ ದೇವಾಲಯವನ್ನು ಸುಂದರೇಶ್ವರನಿಗಾಗಿ ನಿರ್ಮಿಸಲಾಗಿದೆ. ಇಲ್ಲಿ ಸುಂದರೇಶ್ವರನನ್ನು ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.