ಕೃಷ್ಣಮೂರ್ತಿ ಪೆರುಮಾಳ್ ಕೋವಿಲ್ ದೇವಾಲಯವು ಕಾರೈಕುಡಿ ಪಟ್ಟಣದಲ್ಲಿ ನೆಲೆಗೊಂಡಿದೆ. ಈ ಕೋಯಿಲ್ ಅಥವಾ ಕೋವಿಲ್ ಪಟ್ಟಣದ ನಡುಭಾಗದಲ್ಲಿ ನೆಲೆಸಿದ್ದು, ಯಾರು ಬೇಕಾದರು ಸುಲಭವಾಗಿ ತಲುಪಬಹುದು. ಈ ದೇವಾಲಯವನ್ನು ಶಿವ ಮತ್ತು ಪೆರುಮಾಳ್ರವರಿಗಾಗಿ ನಿರ್ಮಿಸಲಾಗಿದೆ. ಪೆರುಮಾಳ್ ಎಂದರೆ ಸ್ಥಳೀಯರ ಪ್ರಕಾರ, ವೆಂಕಟರಮಣ ಸ್ವಾಮಿ. ಪೆರುಮಾಳ್ ಸ್ವಾಮಿಯು ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಒಂದು. ಹಿಂದೂ ಪುರಾಣದ ಪ್ರಕಾರ, ಭಗವಾನ್ ವಿಷ್ಣುವು ಲಯಕಾರಕನಾದ ಶಿವನ ಜೊತೆಗೆ ಲೋಕದ ಸ್ಥಿತಿಕಾರಕನಾಗಿ ಕಾರ್ಯನಿರ್ವಹಿಸುತ್ತಾನೆ. ಇವರ ಜೊತೆಗೆ ಸೃಷ್ಟಿ ಕಾರಕನಾದ ಬ್ರಹ್ಮನು ಸೇರಿ ತ್ರಿಮೂರ್ತಿಗಳು ಎಂಬ ಸ್ಥಾನವನ್ನು ಹುಟ್ಟು ಹಾಕಿದ್ದಾನೆ.
ಸ್ಥಳೀಯರ ಪ್ರಕಾರ, ಈ ಇಬ್ಬರು ದೇವರುಗಳು ಮಾರುವೇಷದಲ್ಲಿ ಭೂಮಿಗೆ ಬರುತ್ತಿರುತ್ತಾರಂತೆ. ಆಗ ಅವರು ಸ್ವರ್ಗದಿಂದ ಭೂಮಿಗೆ ಬರಲು ಮತ್ತು ಇಲ್ಲಿ ನೆಲೆಸಲು ಈ ದೇವಾಲಯವನ್ನು ತಮ್ಮ ನಿವಾಸವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿದೆ. ಕುತೂಹಲಕರವಾದ ವಿಚಾರವೇನೆಂದರೆ ಈ ದೇವಾಲಯದಲ್ಲಿ ಈ ಇಬ್ಬರು ದೇವರ ಸತಿಯರಾದ ಪಾರ್ವತಿ ದೇವಿ ಮತ್ತು ಲಕ್ಷ್ಮೀ ದೇವಿಯವರ ವಿಗ್ರಹಗಳನ್ನು ಇಲ್ಲಿ ಸ್ಥಾಪಿಸಿಲ್ಲ.