ಕರೈಕುಡಿಯ ಕೊಪ್ಪುಡೈ ಅಮ್ಮನ್ ದೇವಾಲಯವು ದಕ್ಷಿಣ ಭಾರತದಲ್ಲಿ ಆಸ್ತಿಕರ ವಲಯದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ದೇವಾಲಯವಾಗಿದೆ.
ವಿವಾಹ ವಿಳಂಬವಾಗುತ್ತಿರುವವರು, ಚರ್ಮ, ಸಂತಾನ ಹೀನತೆ ಹಾಗು ಇನ್ನಿತರ ಹಲವು ಕಾಯಿಲೆಗಳಿಂದ ನರಳುತ್ತಿರುವವರು ಈ ದೇವಾಲಯಕ್ಕೆ ಬಹು ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ದಂತಕಥೆಗಳ ಪ್ರಕಾರ, ಈ ದೇವಾಲಯದಲ್ಲಿ ಹರಕೆ ಹೊರುವುದರಿಂದ ಎಲ್ಲ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಆರೋಗ್ಯದ ಸಮಸ್ಯೆ ಇರುವವರು ಈ ದೇವಾಲಯಕ್ಕೆ ಶ್ರದ್ಧಾ ಭಕ್ತಿಗಳಿಂದ ನಡೆದುಕೊಳ್ಳುವುದರಿಂದ ಅವರ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಇದರ ಜೊತೆಗೆ ಈ ದೇವಾಲಯವು ದಕ್ಷಿಣ ಭಾರತದಲ್ಲಿಯೇ ಅದ್ದೂರಿಯಾದ ಜಾತ್ರೆಗೆ ಸಹ ಖ್ಯಾತಿ ಪಡೆದಿದೆ. ಇದು ಪ್ರತಿವರ್ಷದ ಚೈತ್ರ ಮಾಸದ ಕೊನೆಯ ಮಂಗಳವಾರ ಜರುಗುತ್ತದೆ. ಪ್ರವಾಸಿಗರು ಮತ್ತು ಭಕ್ತಾಧಿಗಳು ಈ ಜಾತ್ರೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಇಲ್ಲಿಗೆ ಆಗಮಿಸುತ್ತಾರೆ.