ರಾಮಕೃಷ್ಣ ಮಿಷನ್ ನ ಸ್ಥಾಪಕರಾದ ರಾಮಕೃಷ್ಣ ಪರಮಹಂಸರ ಶಿಷ್ಯ ವಿವೇಕಾನಂದರ ನೆನಪಿನ ಸ್ಮಾರಕ ಇದಾಗಿದೆ. ವಿವೇಕಾನಂದ ಕಲ್ಲಿನ ಸ್ಮಾರಕವನ್ನು 1970 ರಲ್ಲಿ ನೀಲಿ ಮತ್ತು ಕೆಂಪು ಗ್ರಾನೈಟ್ಗಳನ್ನು ಬಳಸಿ ಕಟ್ಟಲಾಗಿದೆ. ಸಮುದ್ರ ಮಟ್ಟದಿಂದ 17 ಮೀಟರ್ ಎತ್ತರದಲ್ಲಿ ಕಲ್ಲು ದ್ವೀಪದ ತುಟ್ಟತುದಿಯಲ್ಲಿ ಇದನ್ನು ನಿರ್ಮಿಸಲಾಗಿದೆ. 6 ಎಕರೆ ಜಾಗದಲ್ಲಿ ಇದನ್ನು ಕಟ್ಟಲಾಗಿದೆ. ಈ ಸ್ಮಾರಕವು 2 ಬಂಡೆಗಳ ಮೇಲೆ ನಿಂತಿದೆ ಮತ್ತು ದ್ವೀಪದಿಂದ ಸುಮಾರು 500 ಮೀಟರ್ ದೂರದಲ್ಲಿದೆ.
ವಿವೇಕಾನಂದರು ಕನ್ಯಾಕುಮಾರಿಗೆ ಬಂದು ಈ ಕಲ್ಲಿನಲ್ಲಿ ಕುಳಿತು ರಾತ್ರಿ ಪೂರ್ತಿ ತೀವ್ರ ಧ್ಯಾನ ಮಾಡಿದ್ದರು ಎನ್ನಲಾಗಿದೆ. ಅದರ ನಂತರೆವೆ ಅವರು ವೇದಾಂತವನ್ನು ಸಾರಲು ಮತ್ತು ದೇಶಕ್ಕೋಸ್ಕರ ದುಡಿಯಲು ತಮ್ಮನ್ನು ವಿನಿಯೋಗಿಸಿಕೊಂಡರು ಎನ್ನಲಾಗಿದೆ. 1983 ರಲ್ಲಿ ವಿವೇಕಾನಂದರು ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.1982 ರ ಡಿಸೆಂಬರ್ 24, 25, 26 ರಲ್ಲಿ ವಿವೇಕಾನಂದರು ಭೇಟಿನೀಡಿದ ನೆನಪಿನ ಸ್ಮಾರಕ ಇದಾಗಿದೆ.
ವಿವೇಕಾನಂದ ಬಂಡೆಯ ಒಳಭಾಗದಲ್ಲಿ ವಿವೇಕಾನಂದರ ವಿಗ್ರಹವನ್ನು ನೋಡಬಹುದು. ಈ ಸ್ಮಾರಕವು 2 ಮಂಟಪವನ್ನು ಒಳಗೊಂಡಿದೆ. ಶ್ರೀಪಾದ ಪರೈ ನಲ್ಲಿ ಶ್ರೀಪಾದ ಮಂಟಪವಿದ್ದು ಇದು ದೇವಿ ಕನ್ಯಾಕುಮಾರಿ ಅನುಗ್ರಹವಿರುವ ಪುಣ್ಯ ಸ್ಥಳವಾಗಿದೆ. ವಿವೇಕಾನಂದ ಮಂಟಪವು 4 ಭಾಗಗಳನ್ನು ಒಳಗೊಂಡಿದೆ. ಸಭಾ ಮಂಟಪ, ಧ್ಯಾನ ಮಂಟಪ, ಮುಖ್ಯ ದ್ವಾರ ಮತ್ತು ಮುಖ ಮಂಟಪ. ಧ್ಯಾನ ಮಂಟಪವು ಧ್ಯಾನದ ಕೊಠಡಿ ಆಗಿದ್ದು ಪ್ರವಾಸಿಗರು ಧ್ಯಾನ ಮಾಡಬಹುದು.