ಗಣೇಶ ವಿದ್ಯಾರ್ಥಿ ಉದ್ಯಾನ್ ಎಂದೂ ಕರೆಯಲಾಗುವ ಈ ಫೂಲ್ ಬಾಗ್ ನಗರದ ಹೃದ್ಭಾಗದಲ್ಲಿ, ಕಾನ್ಪುರ ರೈಲು ನಿಲ್ದಾಣ, ಎಲ್ಐಸಿ ಬಿಲ್ಡಿಂಗ್ ಮತ್ತು ನಾನಾರಾವ್ ಪಾರ್ಕ್ ಹತ್ತಿರದಲ್ಲಿ ಇದೆ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಈ ಉದ್ಯಾನವನವನ್ನು ಕ್ವೀನ್ ವಿಕ್ಟೋರಿಯಾ ಗಾರ್ಡನ್ ಎಂದೂ ಕರೆಯುತ್ತಿದ್ದರು.
ಈ ಫೂಲ್ ಬಾಗ್ ನಲ್ಲಿಯೇ ಅನೇಕ ಐತಿಹಾಸಿಕ ಸಾರ್ವಜನಿಕ ಸಭೆಗಳನ್ನು ನಡೆಸಲಾಗಿತ್ತು. ಇಂತಹ ಸಭೆಗಳನ್ನು ಉದ್ದೇಶಿಸಿ ಮಾತನಾಡಿದವರ ಪೈಕಿ ಆಧುನಿಕ ಭಾರತದ ರಾಜಕೀಯ ಮುಖಂಡರಾದ ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ರಾಮ್ ಮನೋಹರ ಲೋಹಿಯಾ ಮುಂತಾದವರಿದ್ದಾರೆ. ಜನಪ್ರಿಯ ಕಾನ್ಪುರ ಸಂಗ್ರಹಾಲಯ ಮತ್ತು ಕೌನ್ಪುರ ಯೂನಿಯನ್ ಗೂ ಈ ಉದ್ಯಾನವನ ಮನೆಯಾಗಿದೆ. ಸಂಗ್ರಹಾಲಯ ನಗರದ ಅಧಿಕೃತ ಮ್ಯೂಸಿಯಂ ಆಗಿದ್ದು, ತನ್ನದೇ ಆದ ಆಕರ್ಷಣೆಯನ್ನು ಹೊಂದಿದೆ. ಕೆಲವು ವರ್ಷಗಳ ತನಕ ಈ ಪಾರ್ಕ್ ಹಚ್ಚಹಸಿರಿನಿಂದ ತುಂಬಿ ಕಂಗೊಳಿಸುತ್ತಿತ್ತು. ಆದರೆ, ಈಗ ಈ ಪಾರ್ಕನ್ನು ರಾಜಕೀಯ ಮೇಳಗಳಿಗೆ ಬಳಸಲಾಗುತ್ತಿದೆ. ಇದರಿಂದಾಗಿ ಇಲ್ಲಿದ್ದ ಹಸಿರೆಲ್ಲ ಹೆಚ್ಚೂಕಡಿಮೆ ಕಣ್ಮರೆಯಾಗಿದೆ.