ಕಣ್ಣೂರಿನಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಸುಂದರೇಶ್ವರ ದೇವಸ್ಥಾನವು ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ. ಕೇರಳಾದ ಹೆಸರಾಂತ ಧಾರ್ಮಿಕ ನಾಯಕರಾದ ಶ್ರೀ ನಾರಾಯಣ ಗುರು 1916 ರಲ್ಲಿ ಈ ಆರಾಧನಾ ಸ್ಥಳವನ್ನು ಗುರುತಿಸಿದ್ದಾರೆ. ಇತಿಹಾಸ ಹೇಳುವ ಪ್ರಕಾರ ಶ್ರೀ ನಾರಾಯಣ ಗುರು ಪ್ರತಿಷ್ಠಾಪಿಸಿದ ನಾಲ್ಕು ದೇವಾಲಯಗಳಲ್ಲಿ ಸುಂದರೇಶ್ವರ ದೇವಸ್ಥಾನ ಅತ್ಯಂತ ಹೆಸರುವಾಸಿಯಾದದ್ದು.
ಸುಂದರೇಶ್ವರನ ರೂಪದಲ್ಲಿ ಇಲ್ಲಿ ಶಿವ ಕಂಡು ಬಂದಿದ್ದು ಆತನನ್ನು ಸೌಂದರ್ಯ ದೇವತೆಯನ್ನಾಗಿ ಇಲ್ಲಿ ಆರಾಧಿಸಲಾಗುತ್ತದೆ. ಸುಂದರೇಶ್ವರ ದೇವಸ್ಥಾನ ಎಲ್ಲಾ ಜಾತಿ ಹಾಗೂ ಭಾಷೆಯ ಜನರಿಗೆ ತೆರೆದಿದ್ದು ಇಡೀ ದಕ್ಷಿಣ ಭಾರತದಲ್ಲೇ ಇದು ವಿಶೇಷವಾಗಿ ಕಂಗೊಳಿಸುತ್ತದೆ.
ಪ್ರತೀ ವರ್ಷ ಏಪ್ರಿಲ್ - ಮೇ ತಿಂಗಳಲ್ಲಿ ದೇವಸ್ಥಾನದ ಪ್ರಮುಖ ಉತ್ಸವ ನಡೆಯುತ್ತದೆ. ಸುಮಾರು 8 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ ಹಾಗೂ ಪಟಾಕಿ ಹೊಡೆಯುವುದು ವಿಶೇಷ ಆಕರ್ಷಣೆಯಾಗಿರುತ್ತದೆ. ಬೇಸಿಗೆಯಲ್ಲಿ ನಡೆಯುವ ಈ ಉತ್ಸವ ಎಲ್ಲರಿಗೂ ಬಲು ಪ್ರಿಯವಾದದ್ದು, ವರ್ಷದ ಯಾವುದೇ ಸಮಯದಲ್ಲಾದರೂ ಈ ದೇವಸ್ಥಾನಕ್ಕೆ ಭೇಟಿ ನೀಡಬಹುದು.