ಕಣ್ಣೂರಿನ ಹೆಸರಾಂತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಇಲ್ಲಿನ ಪಾಯನೂರಿನಲ್ಲಿದೆ. ವಿಷ್ಣುವಿನ ಹತ್ತು ಅವತಾರಗಳಲ್ಲೊಂದಾದ ಪರಶುರಾಮ ದೇವನಿಗೆ ನಿರ್ಮಿಸಿದ ದೇವಸ್ಥಾನ ಇದಾಗಿದೆ. ಸಂಸ್ಕೃತಿಯ ಶ್ರೀಮಂತಿಕೆಗೆ ಹೆಸರುವಾಸಿಯಾಗಿರುವ ಈ ದೇವಾಲಯವನ್ನು ಭ್ರಮರಾಂಭ ಪುರಾಣದಲ್ಲಿಯೂ ಕಾಣಬಹುದಾಗಿದೆ.
ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಾಸ್ತುಶಿಲ್ಪವು ಅತ್ಯಂತ ವಿಶೇಷವಾದ ಆಕರ್ಷಣೆಯನ್ನು ಹೊಂದಿದ್ದು ಪ್ರವಾಸಿಗರು ಹಾಗೂ ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯದ ಹೊರ ಭಾಗದ ಗೋಡೆಯು ಸುಮಾರು 12 ಅಡಿಗಳಿದ್ದು ಉತ್ತಮ ಹಾಗೂ ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿದೆ. ದೇವಸ್ಥಾನ ಹಾಗೂ ಅದರ ಎಲ್ಲಾ ಕಟ್ಟಡಗಳೂ ಸುಮಾರು 3 ಎಕರೆ ಪ್ರದೇಶವನ್ನು ಆವರಿಸಿದೆ. ದೇವಸ್ಥಾನದ ಒಳಭಾಗದ ಗರ್ಭಗುಡಿಯು ಎರಡು ಅಂತಸ್ತುಗಳನ್ನು ಹೊಂದಿದೆ. ಇದನ್ನು ಆನೆಯ ಹಿಂಭಾಗದ ರೂಪದಲ್ಲಿ ನಿರ್ಮಿಸಲಾಗಿದೆ.
ದಕ್ಷಿಣ ಭಾರತದ ಎಲ್ಲಾ ದೇವಸ್ಥಾನಗಳಲ್ಲಿರುವ ಪರಿಶುದ್ಧ ಧ್ವಜವನ್ನು ಈ ದೇವಸ್ಥಾನವೂ ಹೊಂದಿದೆ. ಪ್ರವಾಸಿಗರಿಗೆ ತಂಗಲು ಉತ್ತಮ ಸ್ಥಳಾವಕಾಶ ಮಾಡಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿರುವ ಇಲಾಂಜಿ ಮರವು ವರ್ಷದ ಎಲ್ಲಾ ಕಾಲವೂ ಹೂ ಬಿಡುತ್ತಿದ್ದರೂ ಫಲ ಮಾತ್ರ ಕೊಡುವುದಿಲ್ಲ.