ಕೊಲ್ಲಂ ಜಿಲ್ಲೆಯ ಹೆಸರಾಂತ ದೇವಸ್ಥಾನ ಶ್ರೀ ರಾಘವಾಪುರಂ ದೇವಸ್ಥಾನವನ್ನು ಸ್ಥಳಿಯರು ಹನುಮಾರಾಮಬಲಾಮ್ ಎಂದು ಕರೆಯುತ್ತಾರೆ. ಹನುಮಂತನನ್ನು ಆರಾಧಿಸುವ ಕೇರಳಾದ ಕೆಲವೇ ದೇವಸ್ಥಾನಗಳಲ್ಲಿ ಇದೂ ಒಂದು. ಕಣ್ಣೂರಿನಿಂದ ಸುಮಾರು 30 ಕಿ.ಮೀ.ದೂರದಲ್ಲಿರುವ ಚೆರುತ್ತಾಜಂ ಎಂಬ ಪುಟ್ಟ ಗ್ರಾಮದಲ್ಲಿ ಈ ದೇವಾಲಯವಿದೆ.
ಈ ದೇವಸ್ಥಾನವು 8ನೇ ಶತಮಾನದ ಚರಿತ್ರೆಯನ್ನು ಹೊಂದಿದ್ದು, ಈ ಪ್ರದೇಶವನ್ನು ಆಳಿದ ಅಂದಿನ ಮಹಾರಾಜ ಉದಯ ವರ್ಮ ಕೊಲಾತಿರಿ ದೇವಸ್ಥಾನವನ್ನು ನಿರ್ಮಿಸಿದನು. ದೇವಸ್ಥಾನದ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಒಂದು ಭಾಗವಾಗಿರುವ ತುಳು ನಾಡಿನಿಂದ ಸುಮಾರು 237 ಬ್ರಾಹ್ಮಣರ ಕುಟುಂಬವನ್ನು ಕರೆತಂದು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಈ ದೇವಸ್ಥಾನವನ್ನು ಅವರ ಸುಪರ್ದಿಗೇ ನೀಡಲಾಗಿತ್ತು ಎಂದು ಹೇಳಲಾಗುತ್ತದೆ.