ಎಡಕ್ಕಾಡುವಿನ ಕಣ್ಣೂರು ಪಟ್ಟಣದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಊರ್ಪಳಸ್ಸಿ ಕಾವು ದೇವಸ್ಥಾನ ಒಂದು ಧಾರ್ಮಿಕ ಕೇಂದ್ರವಾಗಿದೆ. ದೇವಾಲಯದ ಒಳಭಾಗದಲ್ಲಿ ಭಗವತಿ, ಶ್ರೀ ಊರ್ಪಳಸ್ಸಿ ದೈವತರ್ ಹಾಗೂ ವೆಟ್ಟಕೋರುಮಾಕನ್ ಅಥವಾ ಕಿರಾತ ಸುನು ಎಂದೂ ಕರೆಯಲಾಗುವ ಮೂರು ಪ್ರಮುಖ ದೇವತೆಗಳನ್ನು ಆರಾಧಿಸಲು ಅವಕಾಶ ಮಾಡಲಾಗಿದೆ. ಒಂದೇ ಕಟ್ಟಡದಲ್ಲಿ ಶೈವ, ವೈಷ್ಣವ ಹಾಗೂ ಕ್ಷತ್ರೀಯ ಪಂಗಡಗಳು ಆರಾಧನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಪ್ರಮುಖ ದೇವಾಯವಲ್ಲದೆ, ಇತರೆ ಪುಟ್ಟ ದೇವಾಲಯಗಳಲ್ಲಿ ಅಡಿಕೆ, ಭತ್ತ ಹಾಗೂ ತುಳಸಿ ಎಲೆಗಳ ಹಾರವನ್ನೂ ಭಕ್ತರುಸಮರ್ಪಿಸುತ್ತಾರೆ. ಸಾಂಪ್ರದಾಯಿಕ ವಾಸ್ತುಶಿಲ್ಪದ ಶೈಲಿಯಲ್ಲೇ ಈ ದೇವಾಲಯನ್ನು ದುರಸ್ತಿ ಮಾಡಲಾಗಿದೆ.
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸುಮಾರು 41 ದಿನಗಳ ಕಾಲ ನಡೆಯುವ ಪ್ರಮುಖ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಹಾಗೂ ಉತ್ಸವಗಳಾದ ಮಂಡಲ ವಿಳಕ್ಕು, ಶಿವರಾತ್ರಿ ಮಹೋತ್ಸವಮ್, ಪಟ್ಟತಾನಂ, ವೆಲ್ಲಾಟಂ ಮತ್ತು ಕಾಳಿಯಾಟಂ, ಊರ್ಪಳಸ್ಸಿ ಕಾವು ದೇವಸ್ಥಾನದ ಪ್ರಮುಖ ಆಕರ್ಷಣೆ. ಧಾರ್ಮಿಕ ಹಾಡುಗಳು - ಸಂಗೀತದ ಮೂಲಕ ವೆಟ್ಟಕೋರುಮಾಕನ್ ದೇವನನ್ನು ಮೆಚ್ಚಿಸುವ 'ವೆಟ್ಟಕೊರುಮಾಕನ್ ಪಾಟ್ಟು,' ಅತ್ಯಂತ ಜನಪ್ರೀಯವಾದದ್ದಾಗಿದೆ.