ವೈಕುಂಠ ಪೆರುಮಾಳ್ ದೇವಸ್ಥಾನವನ್ನು ಪಲ್ಲವ ರಾಜ ನಂದಿವರ್ಮನು ಹದಿನೇಳನೇ ಶತಮಾನದಲ್ಲಿ ನಿರ್ಮಾಣ ಮಾಡಿದನು. ಇದು ವಿಷ್ಣುವಿನ ದೇವಾಲಯವಾಗಿದ್ದು ಮೂರು ಅಂತಸ್ತುಗಳನ್ನು ಹೊಂದಿದೆ. ತುಂಬ ಚೆನ್ನಾಗಿ ಕೆತ್ತನೆ ಮಾಡಿದ ವಿಷ್ಣುಮೂರ್ತಿ ಇಲ್ಲಿದೆ. ಇಲ್ಲಿನ ಮೂರ್ತಿಗಳು ಬೃಹದಾಕಾರವಾಗಿದ್ದು ವಿಷ್ಣುವನ್ನು ಬಗೆಬಗೆಯ ನಿಂತ , ಕುಳಿತ ಮತ್ತು ಒರಗಿಕೊಂಡ ಭಂಗಿಗಳಲ್ಲಿ ತೋರಿಸುತ್ತವೆ.
ಸಾವಿರಾರು ವಿಷ್ಣುಭಕ್ತರು ವಿಷ್ಣುವಿನ ಆಶೀರ್ವಾದಗಳನ್ನು ಬಯಸಿ ಇಲ್ಲಿಗೆ ಪ್ರತಿವರ್ಷ ಬರುತ್ತಾರೆ. ಸಾವಿರಾರು ಪ್ರವಾಸಿಗಳು ಇಲ್ಲಿಗೆ ದೇವಾಲಯದ ಪ್ರಮುಖ ಆಕರ್ಷಣೆಯಾದ ಸಾವಿರ ಕಂಬಗಳ ಮಂಟಪವನ್ನು ನೋಡಲು ಬರುತ್ತಾರೆ. ಪ್ರತಿಯೊಂದು ಕಂಬದಲ್ಲಿ ಬೇರೆಬೇರೆಯೇ ಆದ ಮೂರ್ತಿಯ ಕೆತ್ತನೆ ಹೊಂದಿದ್ದು ಪ್ರತಿ ಕಂಬವೂ ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ. ದೇವಾಲಯದಲ್ಲಿನ ಹಾದಿಗಳು ಸಿಂಹಗಳ ಕೆತ್ತನೆ ಹೊಂದಿದ ಕಂಬಗಳ ಅಧಾರ ಹೊಂದಿವೆ. ದೇವಾಲಯದ ವಾಸ್ತುಶಿಲ್ಪವು ಧಾರ್ಮಿಕ ದೃಷ್ಟಿಯಿಂದಷ್ಟೇ ಅಲ್ಲದೇ ಐತಿಹಾಸಿಕವಾಗಿಯೂ ಗಮನಾರ್ಹವಾಗಿವೆ. ದೇವಾಲಯದ ಗೋಡೆಗಳು ಚಾಳುಕ್ಯರು ಮತ್ತು ಪಲ್ಲವರ ನಡುವಿನ ಕದನಗಳನ್ನು ಹೇಳುವಂತಹ ಬರಹಗಳನ್ನು ಹೊಂದಿವೆ.