ದೇವರಾಜಸ್ವಾಮಿ ದೇವಾಲಯವು ಪ್ರಾಚೀನ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ದೇವಾಲಯವನ್ನು ವಿಜಯನಗರದ ಅರಸರು ವಿಷ್ಣುವಿನಲ್ಲಿನ ಭಕ್ತಿಯಿಂದ ನಿರ್ಮಿಸಿದರು . ಇದು ಕಾಂಚೀಪುರಂ ನಗರದ ಪೂರ್ವ ಭಾಗದಲ್ಲಿದೆ.
ಈ ದೇವಸ್ಥಾನದಲ್ಲಿ ಅತ್ಯುತ್ತಮ ಕೆತ್ತನೆಯ ಕಂಬಗಳಿದ್ದು ಆ ಕಾಲದ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪಗಳ ಬಗ್ಗೆ ಆಳವಾದ ಒಳನೋಟಗಳನ್ನು ಒದಗಿಸುತ್ತವೆ. ಕಂಬಗಳನ್ನು ಕೈಯಿಂದ ಕೆತ್ತಲಾಗಿದ್ದು ಹಿಂದೂ ದೇವತೆಗಳ ವಿಭಿನ್ನ ರೂಪಗಳನ್ನು ಅಲ್ಲಿ ನೋಡಬಹುದು. ದೇವಾಲಯದ ಆವರಣದಲ್ಲಿ ವಿಷ್ಣು ಮತ್ತು ಲಕ್ಷ್ಮಿಯರ ವಿಶಾಲವಾದ ಮದುವೆಯ ಮಂಟಪ ಇದೆ.
ಕಲ್ಲಿನಲ್ಲಿ ಕೆತ್ತಲಾದ ಒಂದು ದೊಡ್ಡ ಸರಪಳಿ ಇಲ್ಲಿನ ವಿಶೇಷವಾಗಿದೆ. ಹತ್ತು ಮೀಟರ್ ಗಳಷ್ಟು ದೊಡ್ಡದಾದ ವಿಷ್ಣುವಿನ ಮೂರ್ತಿಯೊಂದು ದೇವಾಲಯದಲ್ಲಿನ ನೀರಿನ ತೊಟ್ಟಿಯಲ್ಲಿ ಮುಳುಗಿರುತ್ತದೆ. ಪ್ರತಿ ನಲವತ್ತು ವರ್ಷಗಳಲ್ಲಿ ಒಂದು ಸಲ ನೀರಿನ ತೊಟ್ಟಿಯನ್ನು ಬರಿದಾಗಿಸಿದಾಗ ಮಾತ್ರ ವಿಷ್ಣುವಿನ ಈ ಮೂರ್ತಿಯ ದರ್ಶನವನ್ನು ಭಕ್ತರು ಪಡೆಯಬಹುದಾಗಿದೆ. 48 ದಿನಗಳ ನಂತರ ಮತ್ತೆ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಲಾಗುವುದು.