ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಧವಿಧವಾದ ಲಿಂಗಗಳದ್ದೇ ಕಾರುಬಾರು. ಪ್ರತಿ ಕ್ಷೇತ್ರವೂ ವೈಶಿಷ್ಟ್ಯಪೂರ್ಣವಾದ ಮಹತ್ವ ಹೊಂದಿರುವುದರಿಂದಲೇ ಇಲ್ಲಿಗೆ ಭೇಟಿ ನೀಡುವ ಭಕ್ತರು ಬರಿಗೈಯಲ್ಲಿ ವಾಪಸಾಗಲು ಸಾಧ್ಯವೇ ಇಲ್ಲ. ಕಲಂಕರಿ ಎಂಬ ವಿಶಿಷ್ಟ ಕಲೆಗೆ ಪ್ರಸಿದ್ಧಿಯಾದ ಕಾಳಹಸ್ತಿಯಲ್ಲಿ, ಕಾಡಿನ ಸೊಪ್ಪು, ಸೆದೆಗಳನ್ನು ಬಳಸಿ ನೈಸರ್ಗಿಕ ಬಣ್ಣದಿಂದಲೇ ಕುಂಚಕ್ಕೆ ಬಣ್ಣ ನೀಡಲಾಗುವುದರಿಂದ ಇವು ನಿಸರ್ಗಸ್ನೇಹಿಯಾಗಿರುತ್ತವೆ.
ಶ್ರೀರಾi ನಗರ, ಬಿ.ಪಿ. ಅಗ್ರಹಾರದಂತಹ ಪ್ರದೇಶದಲ್ಲಿ ಶಿವಲಿಂಗನ ಹತ್ತಾರು ಅವತಾರಗಳು ಕುಂಚದಲ್ಲಿ ಅರಳಿ, ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಲ್ಲದೇ, ಸ್ಥಳೀಯ ಗುಡಿ ಕೈಗಾರಿಕೆಗಳು ಸಹ ನಿಮ್ಮ ಮನೆಯ ಅಲಂಕಾರಿಕ ವಸ್ತುಗಳಾಗಿ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ.