ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಪ್ರಸನ್ನ ವರದರಾಜ ದೇವಸ್ಥಾನ ಕಾಳಹಸ್ತಿಯ ಮತ್ತೊಂದು ವಿಶೇಷ. ಶ್ರೀಕಾಳಹಸ್ತಿ ದೇವಸ್ಥಾನದ ಸಮೀಪದಲ್ಲೇ ಇರುವ ಪ್ರಸನ್ನ ವರದರಾಜಸ್ವಾಮಿ ದೇವಸ್ಥಾನವನ್ನು ಶ್ರೀಕಾಳಹಸ್ತೀಶ್ವರ ದೇವಸ್ಥಾನದ ಉಪ-ವಿಭಾಗವೆಂದೂ ಕರೆಯಲಾಗುತ್ತದೆ.
ಇತ್ತೀಚೆಗಷ್ಟೇ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದಾಗ, ದೇವಸ್ಥಾನದ ಕೊಠಡಿಯೊಂದರಲ್ಲಿ ಬೃಹತ್ ಗಾತ್ರದ ಮರದ ಬಾಗಿಲೊಂದು ಕಂಡುಬಂದಿತ್ತು. ಆ ಬಾಗಿಲನ್ನು ಬಲವಂತದಿಂದ ದೂಡಿದಾಗ, ಅಲ್ಲಿ ಸಾಕಷ್ಟು ಬೆಲೆ ಬಾಳುವ ಚಿನ್ನಾಭರಣಗಳು, ಪ್ರಾಚೀನ ಅವಶೇಷಗಳು ಕಂಡುಬಂದು, ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಭಾರಿ ಕುತೂಹಲದಿಂದ ದೇವಸ್ಥಾನ ನೋಡಲು ಬಂದ ಜನಜಂಗುಳಿಗೆ ದೇವಸ್ಥಾನ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿತು.