ಶೃಂಗೇರಿ ಮಠ ಸಂಕೀರ್ಣವು ಪೆರಿಯಾರ್ ನದಿಯ ಉತ್ತರ ದಂಡೆಯ ಮೇಲೆ ನೆಲೆಗೊಂಡಿದೆ. ಈ ಸಂಕೀರ್ಣವು ಮೂಲತಃ ಆದಿ ಶಂಕರಾಚಾರ್ಯನವರ ಆಶ್ರಮಕ್ಕೆ ಸೇರಿದ್ದಾಗಿದೆ. ಇದು ಆದಿ ಶಂಕರಾಚಾರ್ಯನವರ ಮಾತೆಯವರಿಗೆ ಸೇರಿದ ಹಲವಾರು ಪೂಜಾ ಮಂದಿರಗಳನ್ನು ಒಳಗೊಂಡಿದೆ. ಈ ಮಠವು ವೇದಗಳ ಕುರಿತಾಗಿ ಹಲವಾರು ಧಾರ್ಮಿಕ ಮುಖಂಡರು ಮತ್ತು ವಿದ್ವಾಂಸರು ನಡೆಸುವ ಚರ್ಚೆಗೆ ಖ್ಯಾತಿಯನ್ನು ಪಡೆದಿದೆ. ಈ ಆಶ್ರಮದ ಒಳಗಡೆ ಶಂಕರಾಚಾರ್ಯ, ಶಾರದಾಂಬೆ ದೇವಿ ಮತ್ತು ಗಣಪತಿ ದೇವರುಗಳ ಗರ್ಭಗುಡಿಗಳನ್ನು ಕಾಣಬಹುದು. ನವರಾತ್ರಿ ಹಬ್ಬವನ್ನು ಇಲ್ಲಿ ಅಪಾರ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ನೀವು ಕಾಲಡಿಯಲ್ಲಿ ನಿಮ್ಮ ರಜಾದಿನವನ್ನು ಕಳೆಯುವುದಿದ್ದಲ್ಲಿ, ಈ ಸ್ಥಳಕ್ಕೆ ಒಮ್ಮೆ ಭೇಟಿಕೊಡಿ.