ಉತ್ತರ ತ್ರಿಪುರಾದ ನರಗ ಕೇಂದ್ರ ಕೈಲಾಶಹಾರ ನಲ್ಲಿ ಲಖಿ ನಾರಾಯಣ ಬಾರಿ ಇದೆ. ಇಲ್ಲಿರುವ ಶ್ರೀ ಕೃಷ್ಣ ದೇವರ ಮೂರ್ತಿಗೆ ಇದು ಪ್ರಸಿದ್ಧವಾಗಿದೆ. ಇದನು ಕೃಷ್ಣಾನಂದ ಸೇವಾಯೆತ್ ಪ್ರತಿಷ್ಟಾಪಿಸಿದರು ಎಂದು ಹೇಳಲಾಗುತ್ತದೆ. ಇಂದು ಇದನ್ನು ಭಾರತದ ಪುರಾತನ ಸ್ಮಾರಕ ಎಂದು ಪರಿಗಣಿಸಲಾಗುತ್ತದೆ.
ಲಖಿ ನಾರಾಯಣ ಬಾರಿ ಕೈಲಾಶಹಾರ್ ನ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾಗದೇ ಇರಬಹುದು ಆದರೆ ಒಮ್ಮೆ ನೀವು ಶಿವನ ವಾಸ ಸ್ಥಾನದಲ್ಲಿ ಕಾಲಿಟ್ಟ ಮೇಲೆ ಇಲ್ಲಿನ ನೈಸರ್ಗಿಕ ಸೌಂದರ್ಯ ನಿಮ್ಮನ್ನು ಈ ಪರಿಸರದೊಂದಿಗೆ ಮೈಮರೆಯುವಂತೆ ಮಾಡುತ್ತದೆ. ಹಾಗೂ ನೀವಿದನ್ನು ಬೇರೆಯವರಿಗೂ ಹೇಳುವಂತೆ ಮಾಡುತ್ತದೆ. ರಾಜಧಾನಿ ನಗರ ಅಗರ್ತಲಾ ಇಲ್ಲಿಂದ 160 ಕಿ.ಮೀ ದೂರದಲ್ಲಿದೆ. ಇದು ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದ ನಗರವಾಗಿದೆ. ಇದು ಸುಮಾರು ಮೂರು ಗಂಟೆಗೂ ಹೆಚ್ಚಿನ ಸಮಯದ ಅಂತರವಾಗಿದೆ. ಕೈಲಾಶಹಾರ್ ತಲುಪಿದ ಬಳಿಕ ನೀವು ನೇರವಾಗಿ ಲಖಿ ನಾರಾಯಣ ಬಾರಿಗೆ ತಲುಪಬಹುದು.