ಗುಜರಾತಿನ ಜುನಾಗಡ್ ನ ಸರಸೈ ಹಳ್ಳಿಯಲ್ಲಿ ರವಿದಾಸ(ನಂತರ ರೋಹಿದಾಸ) ಎಂಬ ಸಂತ ತನ್ನ 15 ವರ್ಷವನ್ನು ಕಳೆದ ಜಾಗವೇ ಸದ್ಗುರು ರೋಹಿದಾಸ ಆಶ್ರಮ. ಸ್ಥಳೀಯರ ಪ್ರಕಾರ ಈ ಆಶ್ರಮದಲ್ಲಿ 7 ಕುಂಡಗಳಿದ್ದವು ಅವುಗಳಲ್ಲಿ ಈಗ ಕೇವಲ 3 ಕಾಣಸಿಗುತ್ತವೆ.
ಸದ್ಗುರು ರೋಹಿದಾಸ ಸಾರ್ವತ್ರಿಕ ಸಹೋದರತ್ವ, ಸಹಿಷ್ಣುತೆ ಮತ್ತು ಅವುಗಳ ಪ್ರಾಮುಖ್ಯತೆಗಳ ಬಗ್ಗೆ ಜನರಿಗೆ ಬೋಧಿಸುತ್ತಿದ್ದರು. ಸದ್ಗುರು ರೋಹಿದಾಸರ ಅನುಯಾಯಿಗಳಲ್ಲಿ ರಾಜ ಪೀಪ, ಮೀರಾಬಾಯಿ ಮತ್ತು ಝಾಲಾ ರಾಣಿ ಇವರುಗಳೂ ಇದ್ದರು.