ಚಂದ್ರಕಾಂತ ಹಂಡಿಕ್ ಭವನ್ ಅಸ್ಸಾಮಿ ಸಾಹಿತ್ಯ ಸಭಾದ ಮುಖ್ಯ ಕಚೇರಿ. 1926ರಲ್ಲಿ ರಾಧಕಾಂತ್ ಹಂಡಿಕ್ ಅವರು ದಾನವಾಗಿ ನೀಡಿದ ಕಚೇರಿ ಇದಾಗಿದೆ. ಸಾಹಿತ್ಯಕ್ಕೆ ಹೆಸರುವಾಸಿಯಾಗಿರುವ ನಗರದಲ್ಲಿ ಚಂದ್ರಕಾಂತ್ ಹಂಡಿಕ್ ಭವನ್ ಸಾಹಿತ್ಯದ ಕ್ಷೇತ್ರದ ಉತ್ಕೃಷ್ಟತೆಯ ಚಿಹ್ನೆಯಾಗಿದೆ. ಚಂದ್ರಕಾಂತ್ ಹಂಡಿಕ್ ಭವನ ಅಸ್ಸಾಮಿ ಸಾಹಿತ್ಯ ಸಭಾದ ಮುಖ್ಯಕಚೇರಿ ಮಾತ್ರವಲ್ಲದೆ, ಅಸ್ಸಾಮಿ ಸಾಹಿತ್ಯದ ಅಭಿವೃದ್ಧಿ ಮತ್ತು ಪ್ರಚಾರದಲ್ಲಿ ಬಹುಮುಖ್ಯ ಪಾತ್ರವಹಿಸಿದೆ.
ಇಲ್ಲಿ ಅನೇಕ ಪ್ರತಿಭಾಶಾಲಿ ಬರಹಗಾರರು ತಮ್ಮ ಕ್ಷೇತ್ರದಲ್ಲಿನ ಉನ್ನತಿಯನ್ನು ಕಂಡಿದ್ದಾರೆ. ದಿಂಬೇಶ್ವರ್ ನೆಯೊಗ್, ಚಂದ್ರಾಧರ್ ಬರುಹ ಮತ್ತು ಮಿತ್ರದೇವ್ ಮಹಾಂತ್ ಸಭಾದೊಂದಿಗೆ ನಿಕಟವಾಗಿದ್ದವರು. ಚಂದ್ರಕಾಂತ್ ಹಂಡಿಕ್ ಭವನ್ ಪ್ರವಾಸಿಗಳಿಗೆ ರಾಜ್ಯದ ಸಾಹಿತ್ಯ ಉತ್ಕೃಷ್ಟತೆ ಮತ್ತು ಜೋರ್ಹತ್ ಸಂಸ್ಕೃತಿಯ ವಿಶೇಷ ಸೊಬಗಿನ ರಸದೌತಣ ನೀಡುತ್ತದೆ.
ಚಂದ್ರಕಾಂತ್ ಹಂಡಿಕ್ ಭವನಕ್ಕೆ ನಗರದ ಯಾವುದೇ ಭಾಗದಿಂದ ರಾಜ್ಯ ಸಾರಿಗೆ ಅಥವಾ ಬಾಡಿಗೆ ವಾಹನಗಳಿಂದ ಸುಲಭವಾಗಿ ತಲುಪಬಹುದು.