ಮಂಡೋರ್ ಉದ್ಯಾನವು ಮಂಡೋರಿನಲ್ಲಿನ ಜನಪ್ರಿಯ ಆಕರ್ಷಕ ಪ್ರವಾಸಿ ತಾಣ. ಹಿಂದೆ ಇದು ಮಾರ್ವಾರ್ ರಾಜರ ರಾಜಧಾನಿಯಾಗಿತ್ತು. ಇಲ್ಲಿನ ಕಲ್ಲಿನ ಛಾವಣಿಯು ಪ್ರಸಿದ್ಧವಾಗಿದ್ದು, ಇದರಿಂದಾಗಿಯೇ ದೇಶಾದ್ಯಂತ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಜೋಧ್ಪುರದ ಹಿಂದಿನ ರಾಜರ ಸಮಾಧಿಯನ್ನೂ ಕೂಡಾ ಇಲ್ಲಿ ಪ್ರವಾಸಿಗರು ಕಾಣಬಹುದು. ಈ ಸಮಾಧಿಯು ಅಥವಾ ದೆವಾಲ್ಗಳು ಹಿಂದೂ ದೇವಸ್ಥಾನಗಳ ಮಾದರಿಯಲ್ಲಿದೆ. ಈ ದೆವಾಲ್ಗಳು ನಾಲ್ಕು ಮಳಿಗೆಯನ್ನು ಹೊಂದಿದೆ. ಸುಂದರವಾದ ಅಂಕಣಗಳನ್ನು ಕೆಂಪು ಕಲ್ಲಿನಿಂದ ಮಾಡಲಾಗಿದೆ. ಮಹಾರಾಜ ಅಜಿತ್ ಸಿಂಗ್ರ ದೆವಾಲ್ ತುಂಬಾ ಆಕರ್ಷಕವಾಗಿದೆ.
ಮಂಡೋರ್ ಉದ್ಯಾನಕ್ಕೆ ಸಮೀಪದಲ್ಲೇ ಎರಡು ಹಾಲ್ ಇದೆ. ಇವುಗಳನ್ನು ಮುನ್ನೂರು ಮಿಲಿಯನ್ ದೇವಸ್ಥಾನ ಮತ್ತು ಹೀರೋಗಳ ಹಾಲ್ ಎಂದು ಕರೆಯಲಾಗಿದೆ. ಈ ಮುನ್ನೂರು ಮಿಲಿಯನ್ ದೇವಸ್ಥಾನವು ಹಿಂದೂ ದೇವರುಗಳ ವರ್ಣರಂಜಿತ ಚಿತ್ರಣಗಳಿಂದ ಆಯ್ದುಕೊಳ್ಳಲಾಗಿದೆ. ಹೀರೋಗಳ ಹಾಲ್ನ್ನು ರಜಪೂತ ರಾಜರಿಗೆ ಅರ್ಪಿಸಲಾಗಿದೆ. ಪ್ರವಾಸಿಗರು ಕಲ್ಲಿನಿಂದ ಮತ್ತು ವಿವಿಧ ಬಣ್ಣಗಳಿಂದ ನಿರ್ಮಿಸಿದ ಈ ಹೀರೋಗಳ ವಿವಿಧ ಮೂರ್ತಿಗಳನ್ನು ನೋಡಬಹುದು.
ಮಂಡೋರ್ ನಗರವನ್ನು ಉದ್ಯಾನದ ಮೇಲಿನಿಂದ ನಿಂತು ನೋಡಬಹುದು. ಇಲ್ಲಿ ಇನ್ನೊಂದು ರಾಣಿಯ ಸಮಾಧಿಯೂ ಇದೆ.