ಜೋಧಪುರ್ ನಲ್ಲಿರುವ ರತನಂದಾದಿಂದ 5 ಕಿ.ಮೀ ದೂರದಲ್ಲಿ ಈ ಗಣೇಶ ದೇವಸ್ಥಾನವಿದೆ. ಪರಮ ಶಿವನ ಮಗನಾದ ಗಣೇಶನಿಗೆ ಇದು ಅರ್ಪಿತವಾಗಿದೆ. ದಂತಕಥೆಯ ಪ್ರಕಾರ, ಒಂದೊಮ್ಮೆ ಶಿಕ್ಷಕಿಯೊಬ್ಬರು ಬೃಹತ್ತಾದ ಪ್ರತಿಮೆಯನ್ನು ರತನಂದಾದ ಗುಡ್ಡಗಳಲ್ಲಿ ನೋಡಿದರು. ಪ್ರತಿಮೆಯು 8 ಅಡಿ ಉದ್ದ ಹಾಗು 5 ಅಡಿ ಅಗಲವಿತ್ತು. ಪ್ರತಿಮೆ ಸಿಕ್ಕ ಈ ಸ್ಥಳದಲ್ಲಿಯೇ ಗಣೇಶ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ದರ್ಶನಕ್ಕೆಂದು ಬರುತ್ತಾರೆ.