ರಾಮರಾಯಿ ಅಥವಾ ರಾಮರಾಯ್ ಜಿಂದ್ ಜಿಲ್ಲೆಯಿಂದ ಪಶ್ಚಿಮಕ್ಕೆ 8 ಕಿ.ಮೀ. ದೂರದಲ್ಲಿ ಜಿಂದ್-ಹನ್ಸಿ ರಸ್ತೆಯಲ್ಲಿರುವ ಜತ್ ಸಮುದಾಯದ ಪ್ರಾಬಲ್ಯವಿರುವ ಗ್ರಾಮ. ಪರಶುರಾಮ ದೇವರು ನಿರ್ಮಿಸಿದ್ದ ಕೊಳ ರಾಮಹರ್ದದಿಂದಾಗಿ ಗ್ರಾಮಕ್ಕೆ ಈ ಹೆಸರು ಬಂದಿದೆ.
ಜಿಂದ್ ನ ಸಮೀಪದ ರಾಮರಾಯಿ ಗ್ರಾಮದಲ್ಲಿರುವ ರಾಮಹರ್ದವನ್ನು ಗುರುತಿಸಿರುವ ವಾಮನ ಪುರಾಣದಲ್ಲಿರುವಂತೆ ಪರಶುರಾಮನು ತನ್ನ ಪೂರ್ವಜರನ್ನು ಸಂತೃಪ್ತಿಗೊಳಿಸಲು ಹಲವಾರು ಮಂದಿ ಕ್ಷತ್ರೀಯ ಅಥವಾ ಹಯಿಹಾಯಸ್ ಗಳನ್ನು ಕೊಂದು ಅವರ ರಕ್ತದಿಂದ ಐದು ಕೊಳಗಳನ್ನು ತುಂಬಿದ. ಕೊಳದಲ್ಲಿದ್ದ ರಕ್ತವು ನೀರಾಗಿ ಪರಿವರ್ತನೆಯಾಯಿತು. ಇದರಿಂದಾಗಿ ರಾಮಹರ್ದದ ಮಂದಿರದಲ್ಲಿರುವ ಕೊಳದಲ್ಲಿ ಸ್ನಾನ ಮಾಡುವುದು ಪವಿತ್ರ ಮತ್ತು ಧರ್ಮಶ್ರೇಷ್ಠತೆಯನ್ನು ಉಂಟು ಮಾಡುತ್ತದೆ ಎಂದು ನಂಬಲಾಗಿದೆ.
ಪರಶುರಾಮ ದೇವರಿಗೆ ಸಮರ್ಪಿಸಲಾಗಿರುವ ಪುರಾತನ ಮಂದಿರವು ಸಮೀಪದಲ್ಲೇ ಇದೆ. ಇಲ್ಲಿರುವ ಮೂರ್ತಿಯನ್ನು ದಿನಾಲೂ ಪೂಜಿಸಲಾಗುತ್ತದೆ. ಪುರಾತನ ಹಳ್ಳಿ ರಾಮರಾಯಿ ಮತ್ತು ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ವರ್ಷವಿಡೀ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ.