ಉಪಗ್ರಹ ಪಟ್ಟಣಗಳು, ನಗರಗಳು ಮತ್ತು ಗ್ರಾಮಗಳು ನೆಲೆಗೊಂಡಿರುವ ಹರ್ಯಾಣ ರಾಜ್ಯದಲ್ಲಿರುವ ಜಿಂದ್ ಜಿಲ್ಲೆಯು ಪುರಾತನ ಆವಾಸಸ್ಥಾನದ ಮಧ್ಯದಲ್ಲಿ ನೆಲೆಯಾಗಿದೆ. ಇವುಗಳ ಹೆಸರು ಮತ್ತು ಮೂಲಗಳು ಪುರಾಣಗಳಲ್ಲಿದೆ.
ಜಿಲ್ಲೆಯು ಹಿಂದೂ ಧರ್ಮದ ಪುರಾತನ ಧರ್ಮ ಮತ್ತು ಸಂಸ್ಕೃತಿ, ಸ್ಥಳ, ವ್ಯಕ್ತಿಗಳು ಮತ್ತು ಸ್ಮಾರಕಗಳಿಗೆ ಮಾತ್ರವಲ್ಲದೆ ಮುಸ್ಲಿಮರಿಗೂ ಹೆಮ್ಮೆಯ ಸ್ಥಳವಾಗಿದೆ. ಜಿಂದ್ ಜಿಲ್ಲೆಯ ತೆಹ್ಸಿಲ್ ನರ್ವಾನದಲ್ಲಿರುವ ಹಜರತ್ ಗಯಿಬಿ ಸಾಹಿಬ್ ಸಮಾಧಿಯು ಇದರಲ್ಲಿ ಒಂದಾಗಿದೆ.
ಸೂಫಿ ಸಂತರಾಗಿರುವ ಹಜರತ್ ಗಾಯಿಬಿ ಸಾಹಿಬ್ ಅವರ ಅವಶೇಷಗಳು ಈ ಸಮಾಧಿಯಲ್ಲಿದೆ. ಅವರು ತುಂಬಾ ಧಾರ್ಮಿಕ ಹಾಗೂ ದೈವಭಕ್ತನಾಗಿದ್ದರು. ಸೂಫಿ ಸಂತರು ಅತಿಮಾನುಷ ಶಕ್ತಿಗಳನ್ನು ಹೊಂದಿದ್ದರು ಮತ್ತು ಹಜರತ್ ಗಾಯಿಬಿ ಸಾಹಿಬ್ ಇದಕ್ಕೆ ಹೊರತಾಗಿರಲಿಲ್ಲ. ಅವರು ಪವಾಡದ ರೀತಿಯಲ್ಲಿ ಮಣ್ಣಿನೊಳಗೆ ಮಾಯವಾದರು ಎನ್ನಲಾಗುತ್ತಿದೆ. ಸಮಾಧಿಯ ಸುತ್ತಲು ಒಂದು ಕೊಳವಿದೆ. ಇದರಲ್ಲಿ ಪ್ರಾರ್ಥನೆಗೆ ಬರುವ ಭಕ್ತರು ತಮ್ಮ ಕೈಕಾಲುಗಳನ್ನು ತೊಳೆಯುತ್ತಾರೆ.