ಸಾಹಿಬ್ ಎನ್ನುವ ಪದ ಸಾಮಾನ್ಯವಾಗಿ ಸಿಖ್ ರ ಮಂದಿರವಾಗಿರುವ ಗುರುದ್ವಾರಗಳಿಗೆ ಬಳಸಲ್ಪಡುತ್ತದೆ. ಆದರೆ ಈ ಪದವನ್ನು ಒಂದು ಹಳ್ಳಿಗೆ ಬಳಸಿರುವುದರ ಕಾರಣವೆಂದರೆ ಈ ಧಾಮ್ತಾನ್ ಧಾರ್ಮಿಕ ಹಾಗೂ ಐತಿಹಾಸಿಕ ತಾಣವಾಗಿರುವುದರಿಂದ. ಧಾರ್ಮಿಕ ಸ್ಥಳ `ಧರ್ಮಸ್ತಾನ' ವನ್ನು ಧಮ್ತಾನವೆಂದು ಪರಿಗಣಿಸಲಾಗಿದೆ.
ಧಾಮ್ತಾನ ಸಾಹಿಬ್ ಜಿಂದ್ ಜಿಲ್ಲೆಯ ತೆಹ್ಸಿಲ್ ನರ್ವಾನ್ ನಿಂದ 17 ಕಿ.ಮೀ. ದೂರದಲ್ಲಿದ್ದು, ಜತ್ ಸಮುದಾಯದವರ ಪ್ರಾಬಲ್ಯವಿರುವ ಗ್ರಾಮದಲ್ಲಿ ಪುರಾತನ ಶಿವ ಮಂದಿರ ಮತ್ತು ರಾಮಾಯಣವನ್ನು ಬರೆದಿದ್ದ ವಾಲ್ಮೀಕಿ ಅವರ ಆಶ್ರಮವಿದೆ. ಇದೇ ಸ್ಥಳದಲ್ಲಿ ಶ್ರೀರಾಮನು ಅಶ್ವಮೇಧ ಯಜ್ಞವನ್ನು ನಡೆಸಿದನೆಂದು ನಂಬಲಾಗಿದೆ.
ಸಿಖ್ ರ 9ನೇ ಗುರುಗಳಾದ ಗುರು ತೇಗ್ ಬಹದೂರ್ ಅವರು ದೆಹಲಿಗೆ ತೆರಳುವ ವೇಳೆ ಇಲ್ಲಿ ವಾಸ್ತವ್ಯ ಹೂಡಿದ್ದರು. ಸ್ಥಳೀಯರು ನೀಡಿರುವ ಸುಮಾರು 500 ಎಕ್ರೆ ಭೂಮಿಯಲ್ಲಿ ಗುರುಗಳ ಭೇಟಿಯ ನೆನೆಪಿಗಾಗಿ ಕೋಟೆಯ ಮಾದರಿಯ ಗುರುದ್ವಾರವನ್ನು ನಿರ್ಮಿಸಲಾಗಿದೆ. ಗ್ರಾಮದಲ್ಲಿ ಮಂಜಿ ಸಾಹಿಬ್ ಎನ್ನುವ ಮತ್ತೊಂದು ಗುರುದ್ವಾರವಿದೆ.