ಭೂತ, ದೆವ್ವ ಮತ್ತು ಆತ್ಮಗಳ ಒಡೆಯನಾಗಿರುವ ಭೂತನಾಥನೆಂದು ಕರೆಯಲ್ಪಡುವ ಶಿವ ದೇವರಿಗೆ ಮೀಸಲಿಟ್ಟಿರುವ ಮಂದಿರವೇ ಭೂತೇಶ್ವರ ಮಂದಿರ. ಉತ್ತರ ಭಾರತದ ಬಹುತೇಕ ಎಲ್ಲಾ ಸ್ಮಶಾನಗಳಲ್ಲಿ ಶಿವನ ದೊಡ್ಡ ವಿಗ್ರಹಗಳು ಹೊಳೆಯುತ್ತಿರುವುದು ಯಾಕೆಂದು ಇದು ವಿವರಿಸುತ್ತದೆ. ಒಬ್ಬ ವ್ಯಕ್ತಿ ಸತ್ತಾಗ ಆತನ ಅಂತ್ಯಕ್ರಿಯೆ ನಡೆಸಿದ ಬಳಿಕ ಆತ್ಮ ಮಾತ್ರ ಉಳಿದುಕೊಳ್ಳುತ್ತದೆ.
ಜಿಂದ್ ನ ಆಡಳಿತ ನಡೆಸಿದ ರಾಜ ರಾಘ್ ಬೀರ್ ಸಿಂಗ್ ಕಟ್ಟಿಸಿದ ಮಂದಿರವು ಗೊಹಾನ ರಸ್ತೆಯಲ್ಲಿದೆ. ದೊಡ್ಡ ಕೊಳದಿಂದ ಆವರಿಸಿಕೊಂಡಿರುವ ಮಂದಿರವನ್ನು ಅಮೃತಸರದ ಸ್ವರ್ಣ ಮಂದಿರದ ಮಾದರಿಯಲ್ಲಿ ಕಟ್ಟಲಾಗಿದೆ. ಇಲ್ಲಿರುವ ಕೊಳವನ್ನು ರಾಣಿ ತಾಲಾಬ್ ಎಂದು ಕರೆಯುತ್ತಾರೆ.
ರಾಣಿಗೆ ಸ್ನಾನ ಮಾಡಲೆಂದು ಈ ಕೊಳ ನಿರ್ಮಿಸಿದ ರಾಜ ಕೊಳ ಮತ್ತು ಅರಮನೆ ಮಧ್ಯೆ ನೇರ ಸುರಂಗ ಮಾರ್ಗ ಕೊರೆಸಿದ್ದ. ರಾಜ ಮನೆತನದವರು ಇದರ ಮೂಲಕವೇ ತೆರಳಿ ಯಾರಿಗೂ ತಿಳಿಯದಂತೆ ಸ್ನಾನ ಮಾಡುವಂತಹ ವ್ಯವಸ್ಥೆ ಮಾಡಿಸಿದ್ದ. ಈ ಸುರಂಗದ ಅವಶೇಷಗಳನ್ನು ಈಗಲೂ ಕಾಣಬಹುದಾಗಿದೆ. ಮಂದಿರದಲ್ಲಿ ಶಿವನನ್ನು ಹೊರತುಪಡಿಸಿ ಇತರ ದೇವರು ಹಾಗೂ ದೇವತೆಗಳ ಮೂರ್ತಿಗಳಿವೆ. ಕೊಳವನ್ನು ಜಿಂದ್ ನ ರಾಜ ಮನೆತನದ ಕೊಳವೆಂದು ಕರೆಯುತ್ತಾರೆ.