ಇಲ್ಲಿ ಪ್ರಸಿದ್ಧವಾದ ಗಣೇಶ ಮಂದಿರವಿದ್ದು,ಗಣೇಶ ದೇವರಿಗೆ ಸಮರ್ಪಿತವಾಗಿದೆ. ಇಲ್ಲಿ ರಾಣಿ ಲಕ್ಷ್ಮಿ ಬಾಯಿ ಮತ್ತು ರಾಜಾ ಗಂಗಾಧರರಾವರ ವಿವಾಹವು 1842 ರಲ್ಲಿ ನಡೆದಿತ್ತು. ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯ ಮೊದಲ ಹೆಸರು ಮಣಿಕರ್ಣಿಕಾ. ಮದುವೆಯ ನಂತರ ಅಕೆಯ ಹೆಸರನ್ನು ಲಕ್ಷ್ಮಿ ಬಾಯಿ ಎಂದು ಮರು ನಾಮಕರಣ ಮಾಡಲಾಯಿತು.
ಇದು ಝಾನ್ಸಿ ಕೋಟೆಯ ಪ್ರವೇಶ ದ್ವಾರದಲ್ಲಿದೆ. ಇದೊಂದು ಸುಂದರವಾದ ದೇವಾಲಯವಾಗಿದ್ದು ಇಲ್ಲಿ ಗಣೇಶ ದೇವರ ಆಕರ್ಷಕ ಮೂರ್ತಿ ಇದ್ದು, ಕೋಟೆಯ ಮತ್ತು ನಗರದ ದೈವ ರಕ್ಷಕನಂತೆ ಕಾರ್ಯ ನಿರ್ವಹಿಸುತ್ತದೆ. ಗುಮ್ಮಟ ಆಕಾರದ ರಚನೆಯ ಹೊರತಾಗಿಯೂ ದೇವಾಲಯದ ವಾಸ್ತು ಶಿಲ್ಪ ಶೈಲಿ ಮತ್ತು ಇದರ ಲಕ್ಷಣಗಳು ಇದು ಕೋಟೆಯೊಂದಿಗೆ ಏಕಕಾಲೀನವಾಗಿ ನಿರ್ಮಾಣವಾಯಿತು ಎಂದು ಸೂಚಿಸುತ್ತವೆ.
ಗಣೇಶ ಮಂದಿರ ಉಳ್ಳ ಝಾನ್ಸಿ ಕೋಟೆಯು ರಾಣಿ ಲಕ್ಷ್ಮಿ ಬಾಯಿ ಮತ್ತು ಅನೇಕ ವೀರ ಭಕ್ತರ ಸಾಹಸ ಗಾಥೆಗೆ ಸಾಕ್ಷಿಯಾಗಿದೆ. ರಾಣಿ ಲಕ್ಷ್ಮಿ ಬಾಯಿಯು ತನ್ನ ಕ್ಷಾತ್ರ ತೇಜಸ್ಸು , ತ್ಯಾಗ ಮತ್ತು ಸ್ವತಂತ್ರ ಹೋರಾಟಕ್ಕಾಗಿ ಪ್ರಸಿದ್ಧಿಯನ್ನು ಪಡೆದಿದ್ದಾಳೆ. ಗಣೇಶ ಮಂದಿರವು ಅಸಂಖ್ಯಾತ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೊಂದು ಜನಪ್ರಿಯವಾದ ಸ್ಥಳವಾಗಿದೆ.