ಚಿರಗಾಂವ ಈ ಗ್ರಾಮವು ಬೇತ್ವಾ ನದಿಯ ತೀರದಲ್ಲಿ ನೆಲೆಗೊಂಡಿದ್ದು, ಝಾನ್ಸಿಯಿಂದ 30 ಕೀಲೊ ಮೀಟರ ದೂರದಲ್ಲಿದೆ. ಚಿರಗಾಂವ ಇದು ಪ್ರಸಿದ್ಧ ಹಿಂದಿ ಕವಿಯಾದ ಮೈಥಿಲಿ ಶರಣ ಗುಪ್ತಾರ ಜನ್ಮ ಸ್ಥಳವಾಗಿದೆ. ಇವರು ದೇಶದ ಪ್ರಸಿದ್ಧ ಹಿಂದಿ ಕವಿ. ಚಿರಗಾಂವದಲ್ಲಿ ಇವರ ಸಮಾಧಿಯನ್ನು ಸಹ ಕಾಣಬಹುದು.
ಈ ನಗರವು ಇನ್ನು ಎರಡು ಪ್ರಸಿದ್ಧ ಸಾಹಿತಿಗಳಿಗೆ ಜನ್ಮವನ್ನು ನೀಡಿದೆ. ಒಬ್ಬರು ಮೈಥಿಲಿ ಶರಣ ಗುಪ್ತರ ಸಹೋದರರಾದ ಸಿಯಾರಾಮ ಶರಣ ಗುಪ್ತ. ಇನ್ನೊಬ್ಬರು ಪ್ರಸಿದ್ಧ ಉರ್ದು ಕವಿಗಳಾದ ಮುನ್ಶಿ ಅಜ್ಮೇರಿ. ಈ ಗುಪ್ತಾ ಸಹೋದರರು ಮುನ್ಶಿಯವರನನ್ನು ತಮ್ಮ ಹಿರಿಯ ಸಹೋದರ ಎಂದು ಪರಿಗಣಿಸಿದ್ದರು.
ಈ ನಗರದಲ್ಲಿ ನೀವು ಮಸೀದಿ ಮತ್ತು ದೇವಾಲಯಗಳು ಒಂದೇ ಪ್ರಾಂಗಣದಲ್ಲಿ ಇರುವುದನ್ನು ಕಾಣಬಹುದು.ಇದು ಮೂರು ದ್ವಾರಗಳನ್ನು ಮತ್ತು ಒಂದು ಕೋಟೆ ಅಥವಾ ಕಿಲ್ಲಾಗಳನ್ನು ಒಳಗೊಂಡಿದೆ. ಈ ನಗರದಲ್ಲಿ ಅನೇಕ ಪ್ರಾಚೀನ ಕೊಳಗಳಿವೆ. ಇಲ್ಲಿ ಪ್ರಸಿದ್ಧವಾದ ಮತ್ತು ಪ್ರಾಚೀನವಾದ ಶಿವ ಸಾಯಿ ದೇವಸ್ಥಾನವಿದ್ದು, ಇದು ಗಂಜ ಹತ್ತಿರವಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.