ಜಮ್ಮು ಸಮೀಪದಲ್ಲಿ ನೆಲೆಗೊಂಡಿರುವ ಸುರಿನ್ಸರ್ ಸರೋವರ, ಬೆಟ್ಟ ಪ್ರದೇಶಗಳ ಜೊತೆಗೆ ದಟ್ಟವಾದ ಕಾಡುಗಳಿಂದ ಸುತ್ತುವರೆದಿದೆ. ಈ ಸರೋವರ ಬೇಸಿಗೆ ಸಮಯದಲ್ಲಿ, ಕಮಲದ ಹೂವುಗಳಿಂದ ತುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಿಂದೂ ಪುರಾಣದ ಪ್ರಕಾರ, ಸುರಿನ್ಸರ್ ಸರೋವರ, ಮಹಾನ್ ಭಾರತೀಯ ಮಹಾಕಾವ್ಯ ಮಹಾಭಾರತದ ಪ್ರಮುಖ ನಾಯಕ ಅರ್ಜುನನೊಂದಿಗೆ ಸಂಬಂಧ ಹೊಂದಿದೆ.
ಪೌರಾಣಿಕ ಯೋಧ, ಅರ್ಜುನ, ಮನ್ಸರ್ ಮಣ್ಣಿನ ಮೇಲೆ ನಿಂತು ಬಾಣ ಪ್ರಯೋಗ ಮಾಡಿದನು. ತರುವಾಯ ಈ ಎರಡು ಸ್ಥಳಗಳಲ್ಲಿ ಅಂದರೆ, ಅರ್ಜುನನ ಬಾಣ ಪ್ರಯೋಗ ಮಾಡಿದ ಸ್ಥಳವನ್ನು ಮನ್ಸರ್ ಮತ್ತು ಅರ್ಜುನನ ಬಾಣ ಬಿದ್ದ ಸ್ಥಳವನ್ನು ಸುರಿನ್ಸರ್ ಎಂದೂ ಹೆಸರಿಸಲಾಯಿತು. ಇದೆ ಮುಂದೆ ಸರೋವರಗಳ ರಚನೆಗೆ ಕಾರಣವಾಯಿತು ಎನ್ನಲಾಗುತ್ತದೆ. ಸುರಿನ್ಸರ್ ಸರೋವರಕ್ಕೆ ಭೇಟಿ ನೀಡಲು ಇಚ್ಛಿಸುವ ಪ್ರವಾಸಿಗರಿಗೆ, ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೊರೇಷನ್ ವಸತಿ ಸೌಕರ್ಯ, ಸೌಲಭ್ಯಗಳನ್ನು ನೀಡುತ್ತದೆ.