ಶ್ರೀ ಮಹಾಮೃತ್ಯುಂಜಯ ಮಹಾದೇವ್ ದೇವಾಲಯವು, ಜಾಗೇಶ್ವರ ದೇವಾಲಯ ಸಂಕೀರ್ಣದಲ್ಲಿ ನೆಲೆಗೊಂಡಿರುವ ಒಂದು ಪುರಾತನ ದೇವಾಲಯವಾಗಿದೆ. ಪೂರ್ವಾಭಿಮುಖಿಯಾಗಿ ನಿಂತಿರುವ ಈ ಶಿವನ ದೇವಾಲಯವು ಇಲ್ಲಿನ ಶಿವಲಿಂಗಕ್ಕೆ ಖ್ಯಾತಿ ಪಡೆದಿದೆ. ಈ ದೇವರನ್ನು ಅಪಮೃತ್ಯುವಿನಿಂದ ಕಾಪಾಡುವ ರಕ್ಷಕನೆಂದು ಪರಿಗಣಿಸಲಾಗಿದೆ. ಈ ಅನುಪಮವಾದ ಲಿಂಗವು ಒಂದು ವಿಶಿಷ್ಟ ರೀತಿಯಾಗಿ ಹೊರಗೆ ಚಾಚಿದ ಭಾಗವನ್ನು ಹೊಂದಿದೆ. ಇದು ನೋಡಲು ಕಣ್ಣಿನಂತೆಯೆ ಕಾಣುತ್ತದೆ. ನಂಬಿಕೆಗಳ ಪ್ರಕಾರ, ಮಹಾಮೃತ್ಯುಂಜಯ ಮಂತ್ರವು ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ಎಲ್ಲ ಬಗೆಯ ತೊಂದರೆಗಳನ್ನು ನಿವಾರಿಸುತ್ತದೆ. ಈ ಮಂತ್ರವನ್ನು ರೋಗ, ಭಯ ಮತ್ತು ಇನ್ನಿತರ ದುಷ್ಟ ಶಕ್ತಿಯ ಪ್ರಭಾವಗಳಿಂದ ವ್ಯಕ್ತಿಯನ್ನು ರಕ್ಷಿಸಲು ಇರುವ ಅತ್ಯುತ್ತಮ ಸಾಧನವೆಂದು ಪರಿಗಣಿಸಲಾಗಿದೆ.