ಜಬಲ್ಪೂರದ ಇತಿಹಾಸದಲ್ಲಿ ತಿಲ್ವಾರ ಘಾಟಿಗೆ ಪ್ರಮುಖ ಸ್ಥಾನವಿದೆ. ಇದು ನರ್ಮದಾ ನದಿಯ ದಂಡೆಯಲ್ಲಿದೆ. ಮಹಾತ್ಮ ಗಾಂಧಿಯವರು ಅಸ್ಥಿ ವಿಸರ್ಜನೆ ನಡೆದದ್ದು ಇದೇ ಸ್ಥಳದಲ್ಲಿ. ಇದರ ನೆನಪಿನಲ್ಲಿ ಗಾಂಧಿ ಸ್ಮಾರಕವನ್ನು ಇಲ್ಲಿ ಕಟ್ಟಿದ್ದಾರೆ. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮೂರು ಬಾರಿ ಜಬಲ್ಪೂರದಲ್ಲಿ ತಂಗಿದ್ದರಂತೆ ಮತ್ತು ಈ ಘಾಟಿಗೆ ಭೇಟಿ ನೀಡಿದ್ದರಂತೆ. ಇದನ್ನು ಗಂಗೆಯಷ್ಟೇ ಪವಿತ್ರವೆಂದು ಭಾವಿಸಿ ಪ್ರತಿ ವರ್ಷ ಲಕ್ಷಾಂತರ ಮಂದಿ ಇದರಲ್ಲಿ ಸ್ನಾನ ಮಾಡುತ್ತಾರೆ. 1939 ರಲ್ಲಿ ಲೋಕಮಾನ್ಯ ತಿಲಕರು ಇಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತಾಡಿದ್ದರಂತೆ. ಅಂದಿನಿಂದ ಇದು ತಿಲಕ್ ಭೂಮಿ ಎಂದು ಹೆಸರಾಯಿತು. ಅಲ್ಲದೆ ಈ ಸ್ಥಳವು ಹಲವು ರಾಜಕೀಯ ನಾಯಕರ ಕರ್ಮಭೂಮಿಯಾಗಿದೆ.