ಜಬಲ್ಪೂರ ನಗರದಿಂದ ಕೆಲವು ಕಿಮೀ ದೂರದಲ್ಲಿ ಈ ಕೆರೆಯಿದೆ. ನಗರದ 52 ಕೆರೆಗಳಲ್ಲಿ 13 ಒಣಗಿಹೋಗಿದೆ. ಹನುಮಾನ್ ತಲ್ಅನ್ನು ಸರ್ಕಾರದವರು ಸಂರಕ್ಷಿಸುತ್ತಿದ್ದಾರೆ. ನಗರೀಕರಣದ ಪ್ರಭಾವದಿಂದ ಈ ಕೆರೆಗಳು ಹಾಳಾಗುತ್ತಿವೆ. ಹೆಸರೇ ಸೂಚಿಸುವಂತೆ ಇದೊಂದು ಪವಿತ್ರ ಸ್ಥಾನ. ಇಲ್ಲಿನ ಸ್ಥಳೀಯರ ನಂಬಿಕೆ ಪ್ರಕಾರ ಹನುಮಂತನು ಇಲ್ಲಿ ಕಾಲಿಟ್ಟಾಗ ಈ ಕೆರೆ ಸೃಷ್ಟಿಯಾಯಿತಂತೆ. ಆದ್ದರಿಂದಲೇ ಇದಕ್ಕೆ ಹನುಮಾನ್ ತಲ್ ಎಂದು ಹೆಸರು. ಈ ಕೆರೆಯ ಸುತ್ತಲೂ ಹಲವು ಹಿಂದೂ ದೇವಸ್ಥಾನಗಳು ಮತ್ತು ಮಸೀದಿಗಳಿವೆ. ಬಿಯೊಹಾರ್ ಮನೆತನದವರು ಇಲ್ಲೊಂದು ಘಾಟ್ ನಿರ್ಮಿಸಿದ್ದಾರೆ.