ಖಜ್ರನ ಗಣೇಶ ದೇವಾಲಯವು ಇಂದೋರಿನ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಈ ದೇವಾಲಯವನ್ನು ರಾಣಿ ಅಹಿಲ್ಯಾಬಾಯಿ ಹೋಳ್ಕರ್ ರವರು ನಿರ್ಮಿಸಿದರು. ಗಣಪತಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು ಭಕ್ತಾಧಿಗಳ ವಲಯದಲ್ಲಿ ಮಹತ್ವದ ಸ್ಥಾನವನ್ನು ಸಂಪಾದಿಸಿದೆ. ನಂಬಿಕೆಗಳ ಪ್ರಕಾರ, ಇಲ್ಲಿ ನೀವು ಕೋರಿದ ಕೋರಿಕೆಯು ನೆರವೇರುತ್ತದೆಯೆಂಬ ನಂಬಿಕೆ ಮನೆಮಾಡಿದೆ. ಈ ಕಾರಣದಿಂದಾಗಿ ಇಲ್ಲಿ ಯಾವಾಗಲು ಭಕ್ತಾಧಿಗಳ ದಂಡೆ ನೆರೆದಿರುತ್ತದೆ.
ಪ್ರತಿ ಬುಧವಾರ ಮತ್ತು ಭಾನುವಾರ ಇಲ್ಲಿ ಜನಸಾಗರವೇ ಸೇರಿರುತ್ತದೆ. ಈ ದೇವಾಲಯದಲ್ಲಿ ನಾವು ಇನ್ನಿತರ ದೇವರುಗಳ ಮೂರ್ತಿಗಳನ್ನು ಕಾಣಬಹುದು. ವಿನಾಯಕ ಚತುರ್ಥಿಯನ್ನು ಇಲ್ಲಿ ಶ್ರದ್ಧಾ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ. ಖಜ್ರನ ದೇವಾಲಯವು ಕೇವಲ ಸ್ಥಳೀಯರಲ್ಲಿ ಮತ್ತು ಭಕ್ತಾಧಿಗಳಲ್ಲಿ ಮಾತ್ರವಲ್ಲದೆ, ಪ್ರವಾಸಿಗರ ವಲಯದಲ್ಲೂ ಸಹ ಖ್ಯಾತಿಯನ್ನು ಪಡೆದಿದೆ. ಇಂದೋರಿಗೆ ಬರುವ ಪ್ರವಾಸಿಗರು ಈ ದೇವಾಲಯಕ್ಕೂ ಭೇಟಿ ನೀಡುತ್ತಾರೆ.