ದೇವ್ಗುರಡಿಯ ಶಿವ ಮಂದಿರ್ ಎಂಬುದು ಇಂದೋರ್ ನಗರದಿಂದ 8 ಕಿ.ಮೀ ದೂರದಲ್ಲಿರುವ ದೇವ್ಗುರಡಿಯ ಎಂಬ ಸಣ್ಣ ಹಳ್ಳಿಯಲ್ಲಿ ನೆಲೆಗೊಂಡಿದೆ. ಕ್ರಿ.ಶ.7ನೇ ಶತಮಾನದಲ್ಲಿ ಕಲ್ಲು ಬಂಡೆಗಳಿಂದ ಕಡೆದು ನಿರ್ಮಿಸಲಾಗಿರುವ ಈ ಪ್ರಾಚೀನ ದೇವಾಲಯವನ್ನು ಶಿವನಿಗಾಗಿ ನಿರ್ಮಿಸಲಾಗಿದೆ. ನಂತರ ಇದನ್ನು 18ನೇ ಶತಮಾನದಲ್ಲಿ ರಾಣಿ ಅಹಿಲ್ಯಾ ಬಾಯಿ ಹೋಳ್ಕರ್ ರವರು ಜೀರ್ಣೋದ್ಧಾರ ಮಾಡಿದರು. ಸ್ಥಳೀಯರ ವಲಯದಲ್ಲಿ ಈ ದೇವಾಲಯವು ಗರುಡ ತೀರ್ಥವೆಂದೆ ಖ್ಯಾತಿ ಪಡೆದಿದೆ.
ಈ ದೇವಾಲಯದ ವೈಶಿಷ್ಟ್ಯವೇನೆಂದರೆ ಇಲ್ಲಿ ನೀರು ಹಸುವಿನ ಬಾಯಿಯನ್ನು ಹೋಲುವ ವಿನ್ಯಾಸವಿರುವ " ಗೋಮುಖ" ಎಂಬ ರಚನೆಯ ಮೂಲಕ ಹೊರಬರುತ್ತದೆ. ಮೂಲ ದೇವ್ಗುರಡಿಯ ಶಿವದೇವಾಲಯ ಮತ್ತು ಅದರ ಶಿವಲಿಂಗವು ನೆಲದಲ್ಲಿ ಹುದುಗಿಹೋಗಿದೆ. ಈಗ ಇರುವ ದೇವಾಲಯವನ್ನು ಅದೇ ಸ್ಥಳದಲ್ಲಿ ನಿರ್ಮಿಸಲಾಗಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಪ್ರತಿ ವರ್ಷವು ಒಂದು ಜಾತ್ರೆ ನಡೆಯುತ್ತದೆ.