ಉಸ್ಮಾನ್ ಸಾಗರ್ ಕೆರೆಯನ್ನು ಹೈದರಬಾದ್ನ ಸ್ಥಳೀಯರು ಗಂಡಿಪೇಟ್ ಎಂದು ಸಹ ಕರೆಯುತ್ತಾರೆ. ಇದು ಈ ನಗರದ ಮತ್ತೊಂದು ಮಾನವ ನಿರ್ಮಿತ ಕೆರೆಯಾಗಿದೆ( ಹುಸೇನ್ ಸಾಗರ್ ನಂತೆ). ಇದನ್ನು ಮೂಸಿ ನದಿಗೆ ಜಲಾಶಯವನ್ನು ನಿರ್ಮಿಸುವ ಕಾಲದಲ್ಲಿ ನಿರ್ಮಾಣ ಮಾಡಲಾಯಿತು. 1920ರಲ್ಲಿ ನಿರ್ಮಾಣಗೊಂಡ ಈ ಕೆರೆಯು ಇಂದಿಗು ಹೈದರಬಾದ್ ಮತ್ತು ಸುತ್ತ ಮುತ್ತಲ ಹಳ್ಳಿಗಳ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. 1908ರಲ್ಲಿ ಪ್ರವಾಹ ಬಂದು ಇಡೀ ನಗರವೇ ಸಂಪೂರ್ಣ ನಾಶವಾಗಿತ್ತು. ಆದರೆ ಈ ಕೆರೆಯು ಅಂತಹ ಪ್ರವಾಹದಿಂದ ಜನರಿಗೆ ಭದ್ರತೆಯನ್ನು ಒದಗಿಸುತ್ತದೆ.
ಉಸ್ಮಾನ್ ಸಾಗರ್ ಕೆರೆಯನ್ನು ಹೈದರಬಾದಿನ ಕಡೆಯ ನಿಜಾಮನಾದ ಉಸ್ಮಾನ್ ಅಲಿ ಖಾನ್ರ ಆಡಳಿತಾವಧಿಯಲ್ಲಿ ನಿರ್ಮಾಣ ಮಾಡಲಾಯಿತು. ಹಾಗಾಗಿ ಅವರ ಹೆಸರನ್ನೆ ಈ ಕೆರೆಗೆ ಇಡಲಾಯಿತು. ಈ ಕೆರೆಯಿಂದ ಕಾಣುವಂತೆ ಸುಂದರವಾದ ರಾಜರ ಅತಿಥಿಗೃಹವನ್ನು ನಿರ್ಮಾಣ ಮಾಡಿರುವುದನ್ನು ನಾವು ಕಾಣಬಹುದು. ಸಾಗರ್ ಮಹಲ್ ಎಂದು ಕರೆಯಲಾಗುವ ಈ ಅತಿಥಿ ಗೃಹವನ್ನು ಉಸ್ಮಾನ್ ಖಾನ್ ಬೇಸಿಗೆ ಅರಮನೆಯಾಗಿ ಬಳಸುತ್ತಿದ್ದನು. ಈಗ ಈ ಅತಿಥಿಗೃಹವು ಒಂದು ಪಾರಂಪರಿಕ ಕಟ್ಟಡವಾಗಿ ಬಳಕೆಯಾಗುತ್ತಿದ್ದು, ಕೆರೆಯ ಮಂತ್ರಮುಗ್ಧಗೊಳಿಸುವ ಮತ್ತು ಅಚ್ಚರಿಯುಂಟು ಮಾಡುವ ನೋಟಗಳನ್ನು ಒದಗಿಸುತ್ತದೆ. ಈ ರಾಜರ ಅತಿಥಿ ಗೃಹವನ್ನು ಇಂದು ಐಶಾರಾಮಿ ರೆಸಾರ್ಟ್ ಆಗಿ ಬಳಸಲಾಗುತ್ತಿದೆ.