ಕಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನವನ ಅಥವಾ ಕೆಬಿಆರ್ ರಾಷ್ಟ್ರೀಯ ಉದ್ಯಾನವನವು ಹೈದರಬಾದಿನ ಅತ್ಯಂತ ಐಶಾರಾಮಿ ಜನವಸತಿ ಪ್ರದೇಶವಾಗಿರುವ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನದ ಒಳಗಡೆ ಯುವರಾಜ ಮುಕರ್ರಂ ಜಹನ ಚಿರನ್ ಅರಮನೆ ಸಹ ಇದೆ. ಕೆಬಿಆರ್ ರಾಷ್ಟ್ರೀಯ ಉದ್ಯಾನವನವು "ಕಾಂಕ್ರೀಟ್ ಕಾಡಿನ ಒಳಗಡೆ ಇರುವ ದಟ್ಟಕಾಡು" ಎಂದು ಖ್ಯಾತಿ ಪಡೆದಿದೆ. ಈ ಅರಮನೆ ಮತ್ತು ಅದರ ಸುತ್ತ ಮುತ್ತಲ ಪ್ರದೇಶಕ್ಕೆ 1998ರಲ್ಲಿ ರಾಷ್ಟ್ರೀಯ ಉದ್ಯಾನವನದ ಮಾನ್ಯತೆಯನ್ನು ನೀಡಲಾಯಿತು. ಈ ಪ್ರದೇಶಕ್ಕೆ ಹೊಸ ಹೆಸರು ನೀಡಲಾಗಿದೆ. ಅದರ ಜೊತೆಗೆ ಇಲ್ಲಿನ ಅರಮನೆಯ ಹೆಸರನ್ನು ಯಥಾಸ್ಥಿತಿಯಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಉದ್ಯಾನವನದಲ್ಲಿ ಬೆಳಗ್ಗೆ ಮತ್ತು ಸಂಜೆ ತಾಜಾ ಹವೆಯನ್ನು ಸೇವಿಸಲು ಆಗಮಿಸುವ ವಾಯುವಿಹಾರಿಗಳಿಂದ ಮತ್ತು ವ್ಯಾಯಾಮಗಳಿಂದಾಗಿ ಅತ್ಯಂತ ಚಟುವಟಿಕೆಯಿಂದ ಕೂಡಿರುತ್ತದೆ.
ನೀವು ಇಲ್ಲಿಗೆ ಈ ಸಮಯದಲ್ಲಿ ಭೇಟಿಕೊಟ್ಟರೆ ಹಲವಾರು ಮಂದಿ ಓಡುತ್ತಲೊ ಅಥವಾ ವ್ಯಾಯಾಮ ಮಾಡುತ್ತಲೊ ಇರುವುದನ್ನು ಕಾಣಬಹುದು. ಇದರ ಜೊತೆಗೆ ಈ ಉದ್ಯಾನವನವು ಹಲವಾರು ಪಕ್ಷಿ ಮತ್ತು ಚಿಟ್ಟೆ ಪ್ರಭೇದಗಳಿಗೆ ಆಶ್ರಯವನ್ನೊದಗಿಸಿದೆ. ಈ ಉದ್ಯಾನವನದಲ್ಲಿ ನವಿಲುಗಳನ್ನು , ಕಾಡು ಬೆಕ್ಕುಗಳನ್ನು, ಪ್ಯಾಂಗೋಲಿನ್ಗಳನ್ನು ಮತ್ತು ಭಾರತೀಯ ಪುನುಗು ಬೆಕ್ಕನ್ನು ಕಾಣಬಹುದು. ಇಲ್ಲಿರುವ ಪ್ರಾಣಿಗ ಮತ್ತು ಪಕ್ಷಿಗಳು ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಹಲವಾರು ಕೊಳಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರಾಣಿಗಳಿಗೆ ತಿನಿಸುಗಳನ್ನು ನೀಡುವುದನ್ನು ನಿರ್ಬಂಧಿಸಲಾಗಿದೆ.