ಬಿರ್ಲಾ ಮಂದಿರವು ಹೈದರಬಾದಿನ ಬಿರ್ಲಾ ತಾರಾಲಯಕ್ಕೆ ಹೊಂದಿಕೊಂಡಂತೆ ಇದೆ. ಈ ಮಂದಿರವನ್ನು ನೌಬತ್ ಪಹಾಡ್ ಎಂದು ಕರೆಯಲಾಗುವ ಸ್ಥಳದಲ್ಲಿ ನೆಲೆಗೊಂಡಿದೆ. ಈ ಮಂದಿರವು ಹಿಂದೂಗಳು ಅತ್ಯಂತ ಭಕ್ತಿ ಭಾವದಿಂದ ಪೂಜಿಸಲ್ಪಡುವ ವೆಂಕಟೇಶ್ವರ ಸ್ವಾಮಿಯ ದೇವಾಲಯವಾಗಿದೆ.
ಈ ದೇವಾಲಯವನ್ನು ಕಟ್ಟಲು 10 ವರ್ಷಗಳ ಕಾಲ ಹಿಡಿಯಿತು. ಇದರ ನಿರ್ಮಾಣದ ಜವಾಬ್ದಾರಿಯ ನೇತೃತ್ವವನ್ನು ರಾಮಕೃಷ್ಣಾಶ್ರಮದ ಸ್ವಾಮಿ ರಂಗನಾಥಾನಂದರು ವಹಿಸಿದ್ದರು. ರಾಜಸ್ಥಾನದಿಂದ ತರಲಾದ ಬಿಳಿಯ ಅಮೃತಶಿಲೆಯ ಕಲ್ಲುಗಳಿಂದ ನಿರ್ಮಿಸಲಾಗಿರುವ ಈ ದೇವಾಲಯವು ಅನುಪಮವಾದ ಸೌಂದರ್ಯವನ್ನು ಒಳಗೊಂಡಿದೆ. ಅಲ್ಲದೆ ಈ ಮಂದಿರದಲ್ಲಿ ಘಂಟೆಗಳನ್ನು ಅಳವಡಿಸಿಲ್ಲ. ಧ್ಯಾನದ ವಾತಾವರಣ ಇಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಇಲ್ಲಿ ಧ್ಯಾನ ಮಗ್ನರಾಗಲು ಬಯಸುವವರಿಗೆ ಯಾವುದೇ ಅಡಚಣೆಗಳಾಗುವುದಿಲ್ಲ. ಮುಖ್ಯ ದೇವರಾದ ವೆಂಕಟೇಶ್ವರ ಸ್ವಾಮಿಯೊಂದಿಗೆ ಇನ್ನಿತರ ದೇವರುಗಳನ್ನು ಸಹ ನಾವು ಇಲ್ಲಿ ಕಾಣಬಹುದು. ಈ ಮಂದಿರವು ಶಿವ, ಗಣೇಶ, ಹನುಮಾನ್, ಬ್ರಹ್ಮ, ಸಾಯಿಬಾಬ, ಶಕ್ತಿ, ಲಕ್ಷ್ಮೀ ಮತ್ತು ಸರಸ್ವತಿಯರಿಗಾಗಿ ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ. ಅಲ್ಲದೆ ಗುರು ಗೋವಿಂದ್ ಸಿಂಗ್ರ ಪವಿತ್ರ ಬೋಧನೆಗಳನ್ನು ಸಹ ಈ ದೇವಾಲಯದ ಗೋಡೆಗಳ ಮೇಲೆ ಕಾಣಬಹುದಾಗಿದೆ.