ರಾಜಾಜಿ ಸ್ಮಾರಕ ಹೊಸೂರಿನ ಹತ್ತಿರದಲ್ಲಿದೆ. ಈ ಸ್ಮಾರಕವನ್ನು ತೊರಪಳ್ಳಿ ಹಳ್ಳಿಯಲ್ಲಿ ನಿರ್ಮಿಸಲಾಗಿದ್ದು, ಭಾರತೀಯ ಮೂಲದ ಮೊದಲ ಹಾಗೂ ಕೊನೆಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಸ್ಮರಣಾರ್ಥ ನಿರ್ಮಿಸಲಾಗಿದೆ. ರಾಜಗೋಪಾಲಾಚಾರಿ ತೊರಪಳ್ಳಿಯಲ್ಲಿ ಜನಿಸಿದ್ದು ಈಗಲೂ ಅವರನ್ನು ಈ ಸ್ಥಳದಲ್ಲಿ ಪೂಜಿಸಲಾಗುತ್ತದೆ. ಈ ಸ್ಮಾರಕವು ಒಂದು ಸುಂದರವಾದ ಗ್ರಂಥಾಲಯವನ್ನು ಹೊಂದಿದೆ. ಇಲ್ಲಿ ಛಾಯಾಚಿತ್ರ ಗ್ಯಾಲರಿಯಿದ್ದು, ರಾಜಗೋಪಾಲಾಚಾರಿಯವರ ಯುಗದ ಸಾಧನೆಗಳು ಹಾಗೂ ಅವರ ವ್ಯಕ್ತಿ ಚಿತ್ರದ ಬಗ್ಗೆ ಹೇಳಲಾಗಿದೆ. ಅಲ್ಲದೇ ಭಾರತಕ್ಕೆ ಅವರು ಸೇವೆಸಲ್ಲಿಸಿರುವ ನೆನಪಿಗಾಗಿ ಅವರ ವಿಗ್ರಹವನ್ನೂ ಇಲ್ಲಿ ನಿರ್ಮಿಸಲಾಗಿದೆ. ರಾಜಾಜಿ ಸ್ಮಾರಕವನ್ನು ತಲುಪುವುದು ಅತ್ಯಂತ ಸುಲಭ.
ಮಾರ್ಗಸೂಚಿ ಹೀಗಿದೆ :ಹೊಸೂರಿನಿಂದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಕೃಷ್ಣಗಿರಿಗೆ ಸಾಗುವ ಮಾರ್ಗದಲ್ಲಿ ಹೋಗಬಹುದು. ಪೆರಂಡಪಳ್ಳಿ ತಲುಪುವಾಗ, ತೊರಪಳ್ಳಿ ಪ್ರದೇಶದ ಆರಂಭದಲ್ಲಿರುವ ಸ್ವಾಗತ ಕಮಾನಿನ ಬಳಿ ಬಲಕ್ಕೆ ತಿರುಗಬೇಕು. ಇಲ್ಲಿಂದ 3 ಕಿ. ಮೀ ಮುಂದೆ ಸಾಗಿದರೆ ರಾಜಾಜಿ ಸ್ಮಾರಕವನ್ನು ತಲುಪಬಹುದು.