ಪ್ರವಾಸಿಗರು ಹೊರನಾಡಿನ ಪ್ರವಾಸದಲ್ಲಿ ನೋಡಬೇಕಾದ ಮತ್ತೊಂದು ಸ್ಥಳ ಕಳಸೇಶ್ವರ ದೇವಾಲಯ. ಈ ದೇವಾಲಯವು ಹೊರನಾಡಿನಿಂದ ಕೇವಲ ಅರ್ಧ ಗಂಟೆಯ ಪ್ರಯಾಣದ ಅಂತರದಲ್ಲಿರುವ ಕಳಸ ಗ್ರಾಮದಲ್ಲಿ. ಈ ದೇವಾಲಯವು ಭದ್ರಾ ನದಿ ಹರಿದು ಬರುವ ಬೆಟ್ಟದ ಮೇಲೆ ಸ್ಥಾಪಿತಗೊಂಡಿದೆ.ಈ ದೇವಾಲಯದಲ್ಲಿ ಎರಡು ಆನೆಗಳ ವಿಗ್ರಹಗಳಿದ್ದು, ಅವುಗಳಲ್ಲಿ ಒಂದು ಗಣೇಶನದಾಗಿದ್ದು ಮತ್ತೊಂದು ಹೆಣ್ಣಾನೆಯಾದ ಆತನ ಪತ್ನಿಯದಾಗಿದೆ. ಎರಡು ವಿಗ್ರಹಗಳೂ ನೋಡಲು ಒಂದೇ ರೀತಿ ಕಾಣುತ್ತದೆ. ಆದರೆ ಗಂಡಾನೆಯ ಪಾದದ ಅಡಿಯಲ್ಲಿ ಅಸುರರನ್ನು ಕಾಣಬಹುದು. ಈ ಸ್ಥಳವು ಗಣೇಶನಿಂದ ಹತ್ಯೆಗೊಳಗಾದ ಅಸುರನದಾಗಿತ್ತು ಎಂಬ ನಂಬಿಕೆಯಿದೆ. ಪ್ರವಾಸಿಗರು ಕಳಸೇಶ್ವರನ ಪುತ್ಥಳಿ ಹಾಗೂ ಕಳಸದಲ್ಲಿ ಶಿವನೇ ಆ ರೂಪದಲ್ಲಿ ಅವತರಿಸಿಹನೆಂದು ನಂಬಿರುವ ಲಿಂಗವನ್ನು ದರ್ಶನ ಮಾಡಬಹುದು.