ಹೊನ್ನೇಮರಡು ಪ್ರದೇಶಕ್ಕೆ ಬರುವ ಯಾವುದೇ ಪ್ರವಾಸಿಗರು ವರದಪುರಕ್ಕೆ ಭೇಟಿ ನೀಡಲೇ ಬೇಕು. ವರದಪುರ ಸ್ಥಳವು 20 ನೇ ಶತಮಾನದ ಪ್ರಸಿದ್ಧ ಸಾಧುಗಳಾದ ಶ್ರೀಧರ ಸ್ವಾಮಿಯವರ ಸಮಾಧಿಯನ್ನು ಹೊಂದಿರುವ ಸ್ಥಳವಾಗಿದೆ. ಹೆಸರುವಾಸಿಯಾದ ಶ್ರೀ ಶ್ರೀಧರ ಸ್ವಾಮಿ ಮಠವು ವರದಪುರದಲ್ಲಿಯೇ ಇದೆ. ಈ ಪಟ್ಟಣವು ವರದಳ್ಳಿ ಎಂದೂ ಕೂಡಾ ಕರೆಯಲ್ಪಟ್ಟಿದೆ. ಈ ಮಠವನ್ನು ತಲುಪಲು ಸಾಗರದ ಪಟ್ಟಣದ ಮಿತಿಯನ್ನು ದಾಟಿ 6 ಕಿ.ಮೀ ನಷ್ಟು ದೂರ ಪ್ರವಾಸಿಗರು ಪ್ರಯಾಣ ಮಾಡಬೇಕಾಗುತ್ತದೆ.