ಕನ್ನಡದಲ್ಲಿ ಇಕ್ಕೇರಿ ಎಂದರೆ 'ಎರಡು ಬೀದಿ' ಎಂಬರ್ಥವಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಪುಟ್ಟ ಪಟ್ಟಣವೇ ಇಕ್ಕೇರಿ. ಶಿವಮೊಗ್ಗಕ್ಕೆ ಬಂದಾಗ ಇಕ್ಕೇರಿಗೆ ಭೇಟಿ ನೀಡಲೇ ಬೇಕು. ಕ್ರಿ. ಶ .ಪೂ 1560 ರಿಂದ ಕ್ರಿ. ಶ. ಪೂ 1540 ರ ವರೆಗೆ ಕೆಳದಿಯ ರಾಜಧಾನಿ ಇಕ್ಕೇರಿಯಾಗಿತ್ತು !
ಈ ಸ್ಥಳದಲ್ಲಿರುವ ಅಘೋರೇಶ್ವರ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. ಈ ದೇವಾಲಯವನ್ನು ಸಂಪೂರ್ಣವಾಗಿ ಗ್ರಾನೈಟ್ ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಆದ್ದರಿಂದ ಈ ದೇವಾಲಯ ಇಲ್ಲಿನ ಪ್ರಧಾನ ಆಕರ್ಷಣೆ. ಈ ದೇವಾಲಯದ ವಾಸ್ತು ಶಿಲ್ಪಗಳು ಚಾಲೂಕ್ಯ, ದ್ರಾವಿಡ, ಹೊಯ್ಸಳ, ಡೆಕ್ಕನ್ ಸುಲ್ತಾನರು, ಹಾಗೂ ವಿಜಯನಗರದ ಕಲೆಗಳನ್ನು ಪ್ರತಿಬಿಂಬಿಸುತ್ತವೆ. ದೇವಾಲಯದ ಕಲ್ಲಿನ ಗೋಡೆಗಳು ಸಂಕೀರ್ಣ ಕೆತ್ತನೆಗಳು, ವಿಗ್ರಹಗಳು, ಎರೊಟಿಕ್, ದೇವಾಲಯದ ಮಾದರಿ, ಆನೆಗಳ ಹಾಗೂ ಹಳೆಯ ಕನ್ನಡ ಹಸ್ತ ಪ್ರತಿಗಳ ಕೆತ್ತನೆಗಳಿಂದ ಕಂಗೊಳಿಸುತ್ತಿದೆ. ದೇವಾಲಯದ ಪಶ್ಚಿಮ, ಪೂರ್ವ ಹಾಗೂ ಉತ್ತರದ ದಿಕ್ಕುಗಳಲ್ಲಿ ಅಲಂಕೃತ ಬಾಗಿಲುಗಳಿವೆ. ಅಲ್ಲದೇ ದೇವಾಲಯದ ಉತ್ತರ ದ್ವಾರದಲ್ಲಿ ಎರಡು ಆನೆಗಳ ಪ್ರತಿಮೆಗಳನ್ನು ಕಾಣಬಹುದು.
ಇಲ್ಲಿನ ದೇವಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರು ಭೈರವ, ಮಹಿಷಾಸುರಮರ್ದಿನಿ, ಸುಬ್ರಹ್ಮಣ್ಯ, ಹಾಗೂ ಗಣೇಶ ಮುಂತಾದ ಕೆತ್ತನೆಗಳನ್ನೂ ವೀಕ್ಷಿಸಬಹುದು. ಪ್ರಸ್ತುತವಾಗಿ ಅಘೋರೇಶ್ವರ ದೇವಾಲಯವು ಭಾರತದ ಪುರಾತತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ.