ಸುಬ್ರಹ್ಮಣ್ಯ ಶಿವ ಸ್ಮಾರಕವು ವೀರ ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಶಿವ ಅವರ ಗೌರವಾರ್ಥ ನಿರ್ಮಿಸಲಾಗಿದೆ. ಸುಬ್ರಹ್ಮಣ್ಯರವರು 1884 ರಲ್ಲಿ ಮದುರೈ ಹತ್ತಿರದ ವತಲಗುಂಡು ಎಂಬ ಹಳ್ಳಿಯಲ್ಲಿ ಜನಿಸಿದರು ಮತ್ತು ಇವರು ತಮಿಳುನಾಡಿನ ಪ್ರಖ್ಯಾತ ಕ್ರಾಂತಿಕಾರರಲ್ಲಿ ಒಬ್ಬರಾಗಿದ್ದರು. ವಿ.ಒ.ಚಿದಂಬರಂ ಆವರ ಒಡನಾಡಿಯಾಗ್ಗಿದ್ದರು. ಅನೇಕ ಯುವಕರು ಇವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಮದ್ರಾಸ್ ಅಧ್ಯಕ್ಷೀಯ ಆಡಳಿತದ ಮೊದಲ ರಾಜಕೀಯ ಖ್ಯೆದಿಯಾಗಿದ್ದರು. ಇತರ ಮಾರ್ಗಗಳು ವಿಪಲವಾದಾಗ ಹಿಂಸೆಗೆ ಹಿಂಸೆಯೆ ಉತ್ತರ ಎಂಬ ನಿಲುವನ್ನು ಪ್ರತಿಪಾದಿಸಿದರು. ಇವರು ಕವಿ ಹಾಗು ಪಂಡಿತರು, "ಗಾನಭಾನು" ಎಂಬ ಲೇಖನವನ್ನು ಪ್ರಕಟಿಸಿದರು. 1925 ರಲ್ಲಿ ಇವರ ಮರಣಾನಂತರ ಇವರ ಸಮಾಧಿ ಬಳಿ ಸ್ಮಾರಕ ನಿರ್ಮಿಸಲಾಯಿತು.