ಹಿಸಾರ್ ಜಿಲ್ಲೆಯ ಆಗ್ರೋಹ ಎಂಬಲ್ಲಿ ಅಗ್ರೋಹ ಧಾಮ ಅಥವಾ ಅಗ್ರೋಹ ಮಂದಿರ ಉಪಸ್ಥಿತವಿದೆ. ಇದರ ನಿರ್ಮಾಣ 1976ರಲ್ಲಿ ಆರಂಭವಾಗಿ 1984ರಲ್ಲಿ ಮುಕ್ತಾಯವಾಯಿತು. ದೇವಸ್ಥಾನದ ಆವರಣವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮಧ್ಯಭಾಗದಲ್ಲಿ ಮುಖ್ಯ ದೇವತೆಯಾಗಿರುವ ಮಹಾಲಕ್ಷ್ಮೀಗೆ ಮೀಸಲಾಗಿದ್ದರೆ, ಪಶ್ಚಿಮ ಮತ್ತು ಪೂರ್ವ ಭಾಗ ಕ್ರಮವಾಗಿ ದೇವಿ ಸರಸ್ವತಿ ಮತ್ತು ಮೂರು ವರ್ಷಗಳ ಹಿಂದೆ ಅಗ್ರೋಹದ ಮಹಾರಾಜನಾಗಿದ್ದ ಅಗರಸೇನನಿಗೆ ಮೀಸಲಾಗಿದೆ.
ದೇವಸ್ಥಾನದ ಹಿಂಬದಿಯಲ್ಲಿ ಶಕ್ತಿ ಸರೋವರ ಎಂಬ ದೊಡ್ಡ ಕೆರೆಯಿದೆ. ಭಾರತದ 41 ನದಿಗಳಿಂದ ನೀರನ್ನು ತಂದು ಈ ಸರೋವರವನ್ನು 1988ರಲ್ಲಿ ಪವಿತ್ರಮಯಗೊಳಿಸಲಾಯಿತು. ಸರೋವರದ ನೈರುತ್ಯ ಭಾಗದಲ್ಲಿ ದೇವರು ಮತ್ತು ದೈತ್ಯರು ನಡೆಸಿದ ಸಮುದ್ರ ಮಂಥನ ಬಿಂಬಿಸುವ ಆಕೃತಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಯೋಗ ಮತ್ತು ಇತರ ವಿಧಾನಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಸರ್ಗ ಕೇಂದ್ರವೂ ಇದೆ. ಶರದ್ ಪೂರ್ಣಿಮೆಯ ದಿನ ಪ್ರತಿ ವರ್ಷ ಈ ದೇವಸ್ಥಾನದಲ್ಲಿ ಅಗ್ರೋಹ ಮಹಾ ಕುಂಭ ಉತ್ಸವವನ್ನು ಆಚರಿಸಲಾಗುತ್ತದೆ.