ಹಸ್ತಿನಾಪುರ ನಗರದ ಕುರಿತು ಜೈನ ಧರ್ಮಗ್ರಂಥಗಳಲ್ಲಿ ಮಹಾ ಪೂಜ್ಯತೆಯೊಂದಿಗೆ ಉಲ್ಲೇಖಿಸಲಾಗಿದೆ. ಭರತ ಚಕ್ರವರ್ತಿಯ ಪ್ರಸ್ತಾವನೆಯೊಂದಿಗೆ ಇದು ಆರಂಭವಾಗುತ್ತದೆ. ಒಟ್ಟು ಹನ್ನೆರಡು ಚಕ್ರವರ್ತಿಗಳಲ್ಲಿ ಆರು ಚಕ್ರವರ್ತಿಗಳು ಈ ಸ್ಥಳದಲ್ಲಿಯೇ ಜನ್ಮ ತಳೆದರು. ರಾಮಾಯಣದ ಭಗವಾನ ಪರುಶರಾಮರು ಸಹ ಇಲ್ಲಿಯವರಾಗಿದ್ದಾರೆ.
ಐತಿಹಾಸಿಕ ಜೈನ ಮಂದಿರವಾದ ಶ್ರೀ ಶ್ವೇತಾಂಬರ ದೇವಸ್ಥಾನವು ಪ್ರಾಚೀನ ವಿಗ್ರಹಗಳಿಗೆ ನೆಲೆಯಾಗಿದೆ. ರಾಜ್ಯದಲ್ಲಿ ಈ ಸ್ಥಳವನ್ನು 1960 ರವರೆಗೆ ನಿರ್ಲಕ್ಷಿಸಲಾಗಿತ್ತು. ವಿಜಯ ವಲ್ಲಭ ಸುರಿಜಿ ಪಂಥದ ಆಚಾರ್ಯ ವಿಜಯ ಸಮುದ್ರಸುರಿಜಿ ಇಲ್ಲಿಗೆ ಭೇಟಿ ನೀಡಿದ ಮೇಲೆ ಇದನ್ನು ಪುನರುಜ್ಜಿವನಗೊಳಿಸಲಾಯಿತು.
ಮಹಾನ ಆಚಾರ್ಯರು ಇದರ ಮೇಲೆ ಒಂದು ಪರಾಕಾಷ್ಟೆಯನ್ನು ನಿರ್ಮಿಸುವ ಮೂಲಕ ಇದರ ನವೀಕರಣಕ್ಕೆ ಚಾಲನೆ ನೀಡಿದರು. ಇವರು ಮುಖ್ಯವಿಗ್ರಹವಾದ ಶ್ರೀ ಶಾಂತಿನಾಥ ಭಗವಾನರ ವಿಗ್ರಹವನ್ನು ಸ್ಥಾಪಿಸಿದರು. ಇದು ಪ್ರತ್ಯೇಕವಾಗಿ ನೆಲೆ ನಿಂತಿರುವ ಶ್ರೀ ಕುಂತುನಾಥ ಭಗವಾನ ಮತ್ತು ಶ್ರೀ ಅರ್ನಾಥ ಭಗವಾನರ ವಿಗ್ರಹಗಳಿಂದ ಸುತ್ತುವರೆದಿದೆ.
ಈ ದೇವಾಲಯದ ಪ್ರಾಮುಖ್ಯತೆಯ ಪ್ರಮುಖ ಅಂಶ ಎಂದರೆ , ಮೊದಲ ಜೈನ ತೀರ್ಥಂಕರರಾದ ಭಗವಾನ ಶ್ರೀ ಆದಿನಾಥರು ತಮ್ಮ ಹದಿಮೂರು ತಿಂಗಳುಗಳ ಉಪವಾಸ ವೃತವನ್ನು, ಶ್ರೇಯಂಸ ಕುಮಾರರಿಂದ ಕಬ್ಬಿನ ಹಾಲನ್ನು ತೆಗೆದುಕೊಳ್ಳುವ ಮೂಲಕ ಈ ಸ್ಥಳದಲ್ಲಿ ಪರಿ ಸಮಾಪ್ತಿಗೊಳಿಸಿದರು.
ಈ ದೇವಾಲಯದ ಎದುರಿಗೆ ಉಪವಾಸ ನಿರತರು ಮಹಾನ ಪ್ರಾಣ ಅಥವಾ ಉಪವಾಸವನ್ನು ನಿಲ್ಲಿಸುವ ವಿಧಿವಿಧಾನಗಳನ್ನು ಅನುಕರಿಸುವ ಸಲುವಾಗಿಯೇ ಒಂದು ವಿಶಾಲ ಕೋಣೆಯನ್ನು ನಿರ್ಮಿಸಲಾಗಿದೆ. ಇಲ್ಲಿಗೆ ಪ್ರತಿವರ್ಷವು ಅಕ್ಷಯ ತೃತೀಯ ದಿನದಂದು ಸಾವಿರಾರು ಯಾತ್ರಿಕರು ಉಪವಾಸ ವೃತವನ್ನು ಪರಿಸಮಾಪ್ತಿಗೊಳಿಸುವ ಸಲುವಾಗಿಯೇ ಬರುತ್ತಾರೆ. ಇಲ್ಲಿ ಅಂಥ ಯಾತ್ರಿಕರಿಗೆ ವಸತಿ ಸೌಲಭ್ಯವಿದೆ. ಈ ಯಾತ್ರಿಕರು ವರ್ಷ ಪೂರ್ತಿ ಲಾಂಗೋವರ್ಸಿ-ತಪ್ಪಸ್ಸನ್ನು ಕೈಗೊಂಡಿರುತ್ತಾರೆ.