ಹಸ್ತಿನಾಪುರದಲ್ಲಿರುವ ಕರಣನ ದೇವಸ್ಥಾನವನ್ನು ಮಹಾ ಭಾರತದ ಅವಧಿಯಲ್ಲಿ ನಿರ್ಮಿಸಲಾಯಿತು, ಎಂಬ ನಂಬಿಕೆ ಇದೆ. ಇದು ಶಿವನಿಗೆ ಅರ್ಪಿತವಾಗಿರುವಂತಹ ದೇವಸ್ಥಾನವಾಗಿದೆ. ದಂತ ಕಥೆಗಳ ಪ್ರಕಾರ, ಈ ದೇವಾಲಯದ ಗರ್ಭಗುಡಿಯಲ್ಲಿರುವ ಶಿವನ ಲಿಂಗವನ್ನು ದಾನ ವೀರ ಕರ್ಣನು ದಾನ ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಕರ್ಣನು ಮಹಾಭಾರತದ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬನು ಎಂದು ಹೆಸರುವಾಸಿಯಾಗಿದ್ದಾನೆ. ಮಹಾಭಾರತ ಮಹಾಕಾವ್ಯವು ಕರ್ಣನ ಉದಾರತೆ ಮತ್ತು ಶೌರ್ಯತೆಯನ್ನು ತೋರಿಸುವಂತಹ ಹಲವಾರು ಕಥೆಗಳಿಂದ ತುಂಬಿಕೊಂಡಿದೆ. ಹಳೆಯ ಗಂಗಾ ನದಿ ತೀರದ ಮೇಲಿರುವ ದಿಬ್ಬದ ಮೇಲೆ ಈ ದೇವಸ್ಥಾನವನ್ನು ಸ್ಥಾಪಿಸಲಾಗಿದೆ.
ಕೇವಲ ಒಂದು ಚಿಕ್ಕ ಕೋಣೆಯಷ್ಟು ಈ ದೇವಾಲಯವಿದೆ. ಅದಾಗ್ಯೂ ಇದು ಅಸಂಖ್ಯಾತ ಭಕ್ತರನ್ನು, ಯಾತ್ರಿಕರನ್ನು ಮತ್ತು ಪ್ರವಾಸಿಗರನ್ನು ವರ್ಷ ಪೂರ್ತಿ ತನ್ನೆಡೆಗೆ ಆಕರ್ಷಿಸುತ್ತದೆ. ಈ ದೇವಾಲಯಕ್ಕೆ ಗಾಢವಾದ ಗುಲಾಬಿ ಬಣ್ಣವನ್ನು ಲೇಪಿಸಲಾಗಿದೆ. ದೇವಾಲಯದ ಸುತ್ತಮುತ್ತಲಿನಲ್ಲಿ ಅನೇಕ ರಚನಾ ಕಾರ್ಯಗಳನ್ನು ಮಾಡುವ ಮೂಲಕ ದೇವಾಲಯವನ್ನು ಜೀರ್ಣೊದ್ಧಾರ ಮಾಡುವ ಪ್ರಯತ್ನಗಳು ನಡೆದಿವೆ.