ಹರಿಹರೇಶ್ವರದ ಕಾಲಭೈರವ ದೇವಾಲಯ ವಾಸ್ತುಶಿಲ್ಪಕ್ಕಾಗಿ ಪ್ರಸಿದ್ಧಿ ಪಡೆದಿದೆ. ಇದು ಮಹಾರಾಷ್ಟ್ರದ ಪ್ರಮುಖ ದೇವಾಲಯವಾಗಿದೆ. ಇದೊಂದು ಪ್ರಮುಖ ಯಾತ್ರಾಸ್ಥಳವಾಗಿದ್ದು ಪ್ರತಿ ವರ್ಷವು ಸಹಸ್ರಾರು ಭಕ್ತರು ಇಲ್ಲಿಗೆ ಭೇಟಿಕೊಡುತ್ತಾರೆ.
ಇದು ಶಿವನ ದೇವಾಲಯವಾಗಿದ್ದರೂ ಇಲ್ಲಿ ಹಲವಾರು ಇತರೆ ವಿಗ್ರಹಗಳು ಕಂಡುಬರುತ್ತವೆ. ಅವುಗಳಲ್ಲಿ ಕಾಲಭೈರವನ ಮೂರ್ತಿಯು ಒಂದಾಗಿದೆ. ಕಾಲಭೈರವನು ಸಕಲ ಮಂತ್ರ ಶಾಸ್ತ್ರಗಳ ದೇವನೆಂದು ಪ್ರಾಮುಖ್ಯತೆ ಪಡೆದಿದ್ದಾನೆ. ದಂತಕಥೆಗಳ ಪ್ರಕಾರ, ಈಶ್ವರನು ಕಾಲಭೈರವನನ್ನು ಸೃಷ್ಟಿಸಿ ಆತನನ್ನು ಸಕಲ ಮಂತ್ರಗಳಿಂದ ಹರಸಿದನಂತೆ.
ಈ ದೇವಾಲಯದ ವಾಸ್ತುಶಿಲ್ಪವು ಆಕರ್ಷಕವಾಗಿದೆ. ಈ ದೇವಾಲಯದ ಸಮೀಪದಲ್ಲಿ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಯೋಗೇಶ್ವರಿ ದೇವಾಲಯವಿದೆ.
ಮಹಾಶಿವರಾತ್ರಿಯಂತಹ ಸಂದರ್ಭಗಳಲ್ಲಿ ಇಲ್ಲಿ ಶಿವನ ಅನುಗ್ರಹ ಪಡೆಯಲು ಸಹನೆಯಿಂದ ಕಾಯುತ್ತಿರುವ ಭಕ್ತ ಸಮೂಹದ ಉದ್ದ ಸಾಲುಗಳನ್ನು ಕಾಣಬಹುದು. ಈ ದೇವಾಲಯವು ಹರಿಹರೇಶ್ವರ ಬೀಚಿಗೆ ಸಮೀಪದಲ್ಲಿದ್ದು ದೇವಾಲಯಕ್ಕೆ ಒಂದು ವಿಶೇಷವಾದ ಸೌಂದರ್ಯದ ಕೊಡುಗೆ ನೀಡಿದೆ.