ಗಣೇಶ್ ಗಲ್ಲಿ ಎಂಬುದು ಒಂದು ಸಣ್ಣ ಕಾಲುವೆ - ಇದೊಂದು ಅಗಲವಿಲ್ಲದ ಕಾಲುವೆ - ಹರಿಹರೇಶ್ವರ ಪಟ್ಟಣದಲ್ಲಿನ ಎರಡು ಬೆಟ್ಟಗಳ ನಡುವೆ ಇದು ನೆಲೆಸಿದೆ. ಈ ಕಾಲುವೆ ಮೂರು ಅಡಿ ಅಗಲವಿದೆ ಮತ್ತು ಕಾಲುವೆಯ ತುದಿಯಲ್ಲಿ ಪ್ರವಾಸಿಗರು ಗಣಪತಿಯ ದರ್ಶನ ಭಾಗ್ಯ ಪಡೆಯಬಹುದು.
ಗಣಪತಿಯ ಮೂರ್ತಿ ದೊರೆತ ಸ್ಥಳವನ್ನು ಪವಿತ್ರವೆಂದು ಪರಿಗಣಿಸಿ ಆ ಸ್ಥಳದಲ್ಲಿ ಒಂದು ಗುಡಿ ಕಟ್ಟಿದ್ದಾರೆ. ಅದು ನೀರಿನಲ್ಲಿ ಅಂದಾಜು 30 ಅಡಿ ಆಳದಲ್ಲಿ ನೆಲೆಸಿದೆ. ನಂಬಿಕೆಗಳ ಪ್ರಕಾರ, ಈ ಗರ್ಭಗುಡಿಯಲ್ಲಿರುವ ಮೂರ್ತಿಯು ಭರತದ(ಸಮುದ್ರದ ಉಬ್ಬರ-ಇಳಿತ) ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತದೆಯಂತೆ.
ಈ ಸ್ಥಳವು ಮನೋಹರವಾದ ಪ್ರಾಕೃತಿಕ ಸೊಬಗನ್ನು ಹೊಂದಿದ್ದು, ಗಾಳಿಯ ಆರ್ಭಟವಿಲ್ಲದೆ ಮತ್ತು ಅಲೆಗಳ ಅಬ್ಬರವಿಲ್ಲದೆ ಪ್ರವಾಸಿಗರು ಜಲಕ್ರೀಡೆಯಾಡಲು ಪ್ರಶಸ್ತವಾಗಿದೆ.