ದಕ್ಷ ಮಹಾದೇವ ದೇವಸ್ಥಾನ, ಹಿಂದೂ ಶಿವ ದೇವರಿಗೆ ಮೀಸಲಾದ ಹಳೆಯ ದೇವಾಲಯ. ಹರಿದ್ವಾರದಿಂದ 4 ಕಿ. ಮೀ ದೂರದಲ್ಲಿ ಈ ದೇವಾಲಯವಿದೆ. ಈ ದೇವಸ್ಥಾನವನ್ನು ಮೊದಲು, ರಾಣಿ ಡಂಕುರ್ ಳಿಂದ ಕ್ರಿ.ಶ 1810 ರಲ್ಲಿ ನಿರ್ಮಿಸಲಾಯಿತು ಮತ್ತು 1962 ರಲ್ಲಿ ಮರುನಿರ್ಮಾಣ ಮಾಡಲಾಯಿತು.
ಪುರಾಣದ ಪ್ರಕಾರ, ಈ ಸ್ಥಳದಲ್ಲಿ ದಕ್ಷ ಯಜ್ಞವನ್ನು ನಡೆಸಲಾಗಿತ್ತು. ಈ ಆಚರಣೆ, ದಕ್ಷ ಪ್ರಜಾಪತಿ, ಹಿಂದೂ ದೇವತೆ ಸತಿಯ ತಂದೆ ನೆರವೇರಿಸಿದ್ದನು. ತನ್ನ ಅಳಿಯ ಶಿವನನ್ನು ಹೊರತುಪಡಿಸಿ ಈ ಆಚರಣೆಗೆ ಎಲ್ಲರನ್ನೂ ದಕ್ಷ ಆಹ್ವಾನಿಸುತ್ತಾನೆ. ಸತಿ ತನ್ನ ತಂದೆಯ ಈ ವರ್ತನೆಯಿಂದ ಶಿವನಿಗೆ ಅವಮಾನವಾದ್ದರಿಂದ ಪವಿತ್ರ ಯಜ್ಞ ದ ಅಗ್ನಿಯಲ್ಲಿ ಸ್ವತಃ ಜೀವವನ್ನೇ ತ್ಯಾಗ ಮಾಡುತ್ತಾಳೆ. ದೇವತೆ ಸತಿ ತನ್ನ ಜೀವ ತ್ಯಾಗ ಮಾಡಿದ ನಿಖರವಾದ ಸ್ಥಳದಲ್ಲಿ, ದೇವಸ್ಥಾನದಲ್ಲಿ ಒಂದು ಗುಂಡಿಯನ್ನು ಕಾಣಬಹುದು.
ಶಿವನ ಒಂದು ಮೂರ್ತಿ ಲಿಂಗದ ರೂಪದಲ್ಲಿ ದೇವಸ್ಥಾನದ ಮಧ್ಯದಲ್ಲಿ ಸ್ಥಾಪಿಸಲಾಗಿದೆ. ಪ್ರತಿ ವರ್ಷ, ಹಿಂದೂ ತಿಂಗಳ ಸಾವನ್ ಸಂದರ್ಭದಲ್ಲಿ, ಬೃಹತ್ ಸಂಖ್ಯೆಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.