ಹಂಪಿ ಪ್ರದೇಶವು ಅನೇಕ ನೀರಾವರಿ ಕಾಲುವೆಗಳನ್ನು ಹೊಂದಿದ್ದು, ಅವುಗಳು ವಿವಿಧ ಸ್ಥಳಗಳು,ದೇವಾಲಯಗಳು,ತೋಟ್ಟಿಗಳು ಮತ್ತು ಹೊಲಗದ್ದೆಗಳಿಗೆ ಸಂಪರ್ಕವನ್ನು ಹೊಂದಿವೆ. ಇವುಗಳಲ್ಲಿ ಬಹುತೇಕ ಕಾಲುವೆಗಳು ವಿಜಯನಗರ ಸಮ್ರಾಜ್ಯದ ಅವಧಿಯಲ್ಲೇ ರಚಿಸಲ್ಪಟ್ಟಿವೆ. ರಾಯ ಕಾಲುವೆ (ರಾಜನ ಕಾಲುವೆ), ತುರ್ತು ಕಾಲುವೆ,ಕಮಲಾಪುರ ನೀರಿನ ತೊಟ್ಟಿ ಮತ್ತು ಬಸವಣ್ಣ ಕಾಲುವೆ (ನಂದಿ ಕಾನಲ್ ಅಥವಾ ಬುಲ್ ಕಾನಲ್) ಗಳು ವಿಜಯನಗರದ ಅರಸರುಗಳಿಂದ ರಚಿಸಲ್ಪಟ್ಟಿವೆ. ಇವುಗಳಲ್ಲಿ, ಅದರಲ್ಲೂ ಈ ಪ್ರದೇಶದ ಕಣಿವೆಯ ಮೂಲಕ ಹಾದುಹೋಗಿರುವಂತಹ ಕಾಲುವೆಗಳನ್ನು ಇಂದಿಗೂ ಕೂಡ ಕೄಷಿ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಆಗಿನ ಕಾಲದ ಈ ವ್ಯವಸ್ಥಿತ ಸರಬುರಾಜನ್ನು ನೋಡಲು ಇಚ್ಛಿಸುವವರು ಇದನ್ನು ಅವಲೋಕಿಸಬಹುದು.ಪ್ರಾಚೀನ ದಂತಕಥೆಯ ಪ್ರಕಾರ, ಭಗವಾನ್ ರಾಮನು ತನ್ನ ತಂದೆಯಾದ ದಶರಥ ಮಹಾರಾಜನ ಅಂತಿಮ ವಿಧಿವಿಧಾನಗಳನ್ನು ಇದೇ ತುರ್ತು ಕಾಲುವೆಯಲ್ಲಿ ಮಾಡಿದನೆಂದು ಹೇಳಲಾಗಿದೆ. ಕಮಲಾಪುರದಿಂದ ಹಂಪಿಗೆ ಹೋಗುವ ಮಾರ್ಗದಲ್ಲಿರುವ ಲಕ್ಷ್ಮಿನರಸಿಂಹ ಮೂರ್ತಿಯ ಸನಿಹದಲ್ಲೇ ಪ್ರವಾಸಿಗರು ಈ ಕಾಲುವೆಯನ್ನು ನೋಡಬಹುದು. ಈ ರಾಜವೈಭವದ ಪರೀಧಿಯಲ್ಲೆ, ಸುಮಾರು ಕಲ್ಲಿನ ಮೇಲ್ಗಾಲುವೆಗಳನ್ನು ಕಾಣಬಹುದು. ಈ ಎಲ್ಲ ಮೇಲ್ಗಾಲುವೆಗಳು 20 ಹೊಂಡಗಳು ಹಾಗು ಭಾವಿಗಳಿಗೆ ಸಂಪರ್ಕ ಹೊಂದಿವೆ. ಇವುಗಳಲ್ಲಿ ಬಹುತೇಕ ಕಾಲುವೆಗಳನ್ನು ಮರುವಿನ್ಯಾಸಗೋಳಿಸಲಾಗಿದ್ದರೂ ಕೂಡ ಆಗಿನ ಕಾಲದ ಸರಬರಾಜಿನ ವ್ಯವಸ್ಥೆ ಹೇಗಿತ್ತೆಂದು ತಿಳಿಯಬಹುದಾಗಿದೆ.ವಿರಪಾಪುರ ಗದ್ದೆಯಲ್ಲಿರುವ ಮೇಲ್ಗಾಲುವೆಯು ಇಲ್ಲಿರುವ ದೊಡ್ಡ ಮೇಲ್ಗಾಲುವೆಗಳಲ್ಲಿ ಒಂದಾಗಿದೆ.