ರಾಮಾಯಣದ ಪ್ರಕಾರ ಹೋಗುವದಾದರೆ, ಅಂಜನಾದ್ರಿ ಬೆಟ್ಟದ ಸಾಲುಗಳನ್ನು ಹಣುಮಂತ ದೇವರ ಹುಟ್ಟು ಸ್ಥಳವೆಂದು ನಂಬಲಾಗಿದೆ. ಇದರ ಮೇಲೆ ಸುಂದರವಾದ ಹನುಮಾನ್ ದೇವಾಲಯವನ್ನು ಕಟ್ಟಲಾಗಿದ್ದು ಇದನ್ನು ಕೋತಿಗಳ ದೇವನಾದ ಹಣುಮಂತನಿಗೆ ಅರ್ಪಿಸಲಾಗಿದೆ. ಈ ದೇವಾಲಯವನ್ನು ನೋಡಲು ಬೆಟ್ಟ ಹತ್ತುವಾಗ ಪ್ರವಾಸಿಗರು ಕೋತಿಗಳ ಮಧ್ಯೆ ಸಾಗಬೇಕಾಗುತ್ತದೆ.ಒಮ್ಮೆಯಾದರೂ ಹಣುಮಂತನ ಭಕ್ತರು ಭೇಟಿ ನೀಡಲೇ ಬೇಕಾದ ಸ್ಥಳವಿದು.